Advertisement

60 ಲಕ್ಷ ಮೌಲ್ಯದ ಮದ್ಯ ನಾಶ..!

10:24 AM Dec 23, 2021 | Team Udayavani |

ಮಹದೇವಪುರ: ಸೇವನೆಗೆ ಯೋಗ್ಯ ವಲ್ಲದ ಸುಮಾರು 60 ಲಕ್ಷ ಮೌಲ್ಯದ ಅವಧಿ ಮೀರಿದ ಮದ್ಯವನ್ನು ಅಬಕಾರಿ ಅಧಿಕಾರಿಗಳು ನಾಶಪಡಿಸಿದರು.

Advertisement

ವೈಟ್‌ಫೀಲ್ಡ್‌ ಉಪಖಜನೆಯ ಆವರಣದಲ್ಲಿ ನಾಶಪಡಿಸಿ ನಂತರ ಮಾತನಾಡಿದ ಅಬಕಾರಿ ಉಪ ಅಯುಕ್ತ ಬಸವರಾಜ್‌ ಸಂದಿಗವಾಡ, ಕೆಎಸ್‌ ಬಿಸಿಎಲ್‌ ಡಿಪೋದಲ್ಲಿ ಮಾರಾಟವಾಗದೆ ಉಳಿದಿದ್ದ ಅವಧಿ ಮೀರಿದ 60 ಲಕ್ಷ ಮೌಲ್ಯದ ಮದ್ಯವನ್ನು ಪರಿಸರಕ್ಕೆ ಹಾನಿಯಾಗದಂತೆ ವೈಜ್ಞಾನಿಕ ರೀತಿಯಲ್ಲಿ ನಾಶಪಡಿಸಲಾಗಿದೆ ಎಂದರು.

ಇದನ್ನೂ ಓದಿ:- ಕ್ರಿಸ್ಮಸ್‌-ಅನ್ನಮ್ಮ ಚರ್ಚ್‌ನಲ್ಲಿ ಸರ್ವಧರ್ಮ ಸಭೆ

ಅವಧಿ ಮೀರಿದ ಮದ್ಯವನ್ನು ಮಾನ ವನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ, ಆದ್ದರಿಂದ ಯಾರು ಸಹ ಅವಧಿ ಮೀರಿದ ಮದ್ಯವನ್ನು ಸೇವಿಸಬಾರದು ಎಂದು ಹೇಳಿದರು. ಕೆಎಸ್‌ಬಿಸಿಎಲ್‌ನ ಅಬಕಾರಿ ಆಧೀಕ್ಷಕರಾದ ಜಿ, ರಾಮಕೃಷ್ಣಪ್ಪ, ವೈಟ್‌ಫೀಲ್ಡ್‌ ವಲಯ ನೀರಿಕ್ಷಕ ಸುಧೀರ್‌ ಕುಮಾರ್‌ ಸಿ.ಎಂ ಹಾಗೂ ವ್ಯವಸ್ಥಾಪಕ ಚಂದ್ರಶೇಖರ್‌ ಹಾಗೂ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next