Advertisement

ಮೆಣಸಿನಕಾಯಿ ಬೆಳೆ ನಾಶ: ಯುವ ರೈತ ಆತ್ಮಹತ್ಯೆ

02:51 PM Dec 04, 2021 | Team Udayavani |

ಕುರುಗೋಡು: ಅಕಾಲಿಕ ಮಳೆಯಿಂದ ಬೆಳೆ ನಾಶಗೊಂಡ ಹಿನ್ನಲೆ ಸಾಲಭಾದೆ ತಾಳಲಾರದೆ ಗುರುವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವ ರೈತ, ಚಿಕಿತ್ಸೆ ಫಲಕರಿಯಾಗದೆ ಶುಕ್ರವಾರ ಬೆಳಿಗ್ಗೆ ಸಾವನ್ನಪ್ಪಿದ್ದಾನೆ.

Advertisement

ಮದಿರೆ ಗ್ರಾಮದ ರೈತ ಎಂ. ಮೋಹನ್ (34) ಆತ್ಮಹತ್ಯೆ ಮಾಡಿಕೊಂಡ ರೈತ.

ವಿಷ ಸೇವಿಸಿದ ಬಳಿಕ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆ ಕರೆದೊಯ್ಯಲಾಗಿತ್ತು,.

ರೈತನ ತಾಯಿ ಶೈಲಮ್ಮ ಹೇಸಿರಿನಲ್ಲಿ 11.9 ಎಕರೆ ಭೂಮಿ ಇದ್ದು, ಮೆಣಿಸಿನಕಾಯಿ ಬೆಳೆ ಬೆಳೆದಿದ್ದಾನೆ. ಮಳೆಯಿಂದ ನಷ್ಟವಾಗಿದೆ. ಬೆಳೆಗಾಗಿ ವ್ಯವಸಾಯ ಸೇವಾ ಸಹಕಾರ ಸಂಘ ಕೋಳೂರು ಕೇಂದ್ರದಲ್ಲಿ 3 ಲಕ್ಷ ಸಾಲ ತೆಗೆದುಕೊಂಡಿದ್ದು, ಇನ್ನಿತರ ಹೊರಗಡೆ ಕೈ ಸಾಲ ಮಾಡಿದ್ದಾನೆ. ಹಾಗಾಗಿ ಬೆಳೆಗೆ ಸಾಲ ಮಾಡಿದ್ದನು ಹೇಗೆ ತೀರಿಸೋದು ಎಂದು ಚಿಂತಿಸಿ ನೊಂದು ವಿಷ ಸೇವಿಸಿದ್ದಾನೆ.

ಮೃತನ ಅಂತ್ಯ ಕ್ರಿಯೆ ಸ್ವ ಗ್ರಾಮದಲ್ಲಿ ನೆರೆವೇರಿತು. ಮೃತನಿಗೆ ಪತ್ನಿ ಹಾಗೂ 2 ಹೆಣ್ಣು ಹಾಗೂ 1 ಗಂಡು ಮಕ್ಕಳಿದ್ದಾರೆ.

Advertisement

ಮೃತ ರೈತನ ಮನಗೆ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್, ಗ್ರೇಡ್ 2 ತಹಸೀಲ್ದಾರ್ ಮಲ್ಲೇಶಪ್ಪ, ಜಂಟಿ ಕೃಷಿ ನಿರ್ದೇಶಕರು ಮಲ್ಲಿಕಾರ್ಜುನ, ಸಹಾಯಕ ಕೃಷಿ ನಿರ್ದೇಶಕ ಪಲಾಕ್ಷಿಗೌಡ, ಉಪ ಕೃಷಿ ನಿರ್ದೇಶಕ ಚಂದ್ರಶೇಖರ್, ಸಹಾಯಕ ತೋಟಗರಿಕೆ ಅಧಿಕಾರಿ ಯೋಗೀಶ್, ಸಹಾಯಕ ಕೃಷಿ ಅಧಿಕಾರಿ ಎಂ. ದೇವರಾಜ್, ಗ್ರಾಮಲೆಕ್ಕಿಗರು ಭೇಟಿ ನೀಡಿ ಪರಿಶೀಲಿಸಿ ಪ್ರಾಥಮಿಕ ವರದಿ ಯನ್ನು ಪಡೆದುಕೊಂಡರು.

ಈ ಕುರಿತು ಕುರಿತು ಕುರುಗೋಡು ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next