Advertisement

ಶೆಟ್ಟರ್‌ ಹೇಳಿಕೆಗೆ ದೇಶಪಾಂಡೆ ಆಕ್ಷೇಪ

06:45 AM Feb 07, 2018 | Team Udayavani |

ವಿಧಾನಸಭೆ: ಬೆಂಗಳೂರು ಕ್ರೈಮ್‌ ಸಿಟಿ, ಮರ್ಡರ್‌ ಸಿಟಿ, ರೇಪ್‌ ಸಿಟಿ ಎಂಬ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಆರೋಪಕ್ಕೆ ಕೈಗಾರಿಕೆ ಸಚಿವ ಆರ್‌.ವಿ. ದೇಶಪಾಂಡೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಹತ್ಯೆ ಪ್ರಕರಣಗಳ ಬಗ್ಗೆ ಪ್ರಸ್ತಾಪಿಸಿದ ಜಗದೀಶ ಶೆಟ್ಟರ್‌, ಮೊದಲ ಬೆಂಗಳೂರಿಗೆ ಗಾರ್ಡನ್‌ ಸಿಟಿ ಎಂಬ ಹೆಸರಿತ್ತು. ಆದರೆ ಇದೀಗ ಕ್ರೈಮ್‌ ಸಿಟಿ, ಮರ್ಡರ್‌ ಸಿಟಿ ಆಗಿದೆ ಎಂದು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ದೇಶಪಾಂಡೆ, ಆ ರೀತಿ ಹೇಳಬೇಡಿ. ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅಂಕಿ-ಅಂಶ ಇದ್ದರೆ ಹೇಳಿ. ಹೂಡಿಕೆಯಲ್ಲಿ ದೇಶದಲ್ಲೇ ನಾವು ಮೊದಲಿದ್ದೇವೆ, ರಾಜ್ಯದ ಹಿತದೃಷ್ಟಿಯಿಂದ ತಪ್ಪು
ಮಾಹಿತಿ ಕೊಡಬೇಡಿ ಎಂದರು. ಮಾತು ಮುಂದುವರಿಸಿದ ಜಗದೀಶ ಶೆಟ್ಟರ್‌, ಆಯ್ತು ಕೈಗಾರಿಕೆ ಹೂಡಿಕೆ ಯಲ್ಲಿ ನಂಬರ್‌ ಒನ್‌ ಅಂತೀರಿ, ನೀವು 3.35 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಗುರಿ ಹೊಂದಿ ದ್ದೀರಿ, ಇದುವರೆಗೂ ಬಂದಿದ್ದು 50,324 ಕೋಟಿ ರೂ. ಮಾತ್ರ. ಇದಕ್ಕೆ ನಂಬರ್‌ ಓನ್‌ ಎಂದು ದೊಡ್ಡ ದೊಡ್ಡ ಜಾಹೀರಾತು ಹಾಕಿಕೊಂಡಿದ್ದೀರಿ ಎಂದು ಲೇವಡಿ ಮಾಡಿದರು.

ಈ ಸಂದರ್ಭದಲ್ಲಿ ದೇಶಪಾಂಡೆ ಸದನದಲ್ಲಿರಲಿಲ್ಲ. ಸಚಿವರು ಇಲ್ಲದ ಸಮಯದಲ್ಲಿ ಏನೇನೋ ಹೇಳಬೇಡಿ, ಅವರು ಬಂದ ಮೇಲೆ ಹೇಳಿ ಅಂಕಿ-ಅಂಶ ಸಮೇತ ಉತ್ತರ ನೀಡುತ್ತಾರೆ ಎಂದು ಜಾರ್ಜ್‌, ಎಂ.ಬಿ.ಪಾಟೀಲ್‌ ಹೇಳಿದರು. ಆಗ ಜಗದೀಶ ಶೆಟ್ಟರ್‌, ನಾನು ರಾಜ್ಯಪಾಲರ ಭಾಷಣದ 
ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡೋಣ ಎಂದಿದ್ದೆ. ಆದರೆ, ದೇಶಪಾಂಡೆ ಅವರು ಹೂಡಿಕೆಯಲ್ಲಿ ನಂಬರ್‌ ಒನ್‌ ಎಂದು ಹೇಳಿದ್ದಕ್ಕೆ  ಹೇಳಬೇಕಾಯಿತು ಎಂದು ಸಮಜಾಯಿಷಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next