Advertisement

ಚುನಾವಣ ತರಬೇತಿಯಲ್ಲಿ ಜಿಲ್ಲಾಧಿಕಾರಿ

10:19 PM Apr 07, 2019 | Team Udayavani |

ಉಡುಪಿ: ಇಲ್ಲಿನ ಸೈಂಟ್‌ ಸಿಸಿಲಿ ಶಾಲೆಯಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಸಿಬ್ಬಂದಿಗಳಿಗೆ ರವಿವಾರ ತರಬೇತಿ ನಡೆಯಿತು.

Advertisement

ತರಬೇತಿ ಕೇಂದ್ರಕ್ಕೆ ಅನಿರೀಕ್ಷಿತವಾಗಿ ಆಗಮಿಸಿದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಕೊಠಡಿಯೊಂದಕ್ಕೆ ತೆರಳಿ ಸಿಬ್ಬಂದಿ ಮಧ್ಯೆ ಕುಳಿತು, ತರಬೇತುದಾರರಿಗೆ ತರಬೇತಿ ಮುಂದುವರೆಸುವಂತೆ ಸೂಚಿಸಿದರು.

ಚುನಾವಣಾ ಆಯೋಗದಿಂದ ಅಧಿಕೃತ ಗುರುತಿನ ಚೀಟಿ ಪಡೆದ ಪತ್ರಕರ್ತರಿಗೆ ಮಾತ್ರ ಪ್ರವೇಶ ನೀಡಬಹುದಾಗಿದ್ದು, ಮತದಾರರನ್ನು ಹೊರತುಪಡಿಸಿ ಇತರೆ ಯಾರಿಗೂ ಅನಧಿಕೃತ ಪ್ರವೇಶ ಇಲ್ಲ . ಗುರುತು ಚೀಟಿ ಇಲ್ಲದೆ ತಮ್ಮ ಸಂಸ್ಥೆಯ ಗುರುತು ಚೀಟಿ ನೀಡಿದರೂ ಪ್ರವೇಶ ನೀಡಬಾರದು ಎಂದು ತರಬೇತುದಾರರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next