Advertisement

ಬಣಕಲ್ ವೃತ್ತದಲ್ಲಿ ಖಾಯಂ ಪೊಲೀಸರನ್ನು ನಿಯೋಜಿಸಲು ಒತ್ತಾಯ

10:09 PM Jul 09, 2023 | Team Udayavani |

ಕೊಟ್ಟಿಗೆಹಾರ: ಬಣಕಲ್ ಪೇಟೆಯ ಮತ್ತಿಕಟ್ಟೆಗೆ ಸಾಗುವ ವೃತ್ತದಲ್ಲಿ ಸುರಕ್ಷತೆಗಾಗಿ ಖಾಯಂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಬಣಕಲ್ ಮ್ಯಾನ್ ಕೈಂಡ್ ಕ್ಲಬ್ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

Advertisement

ಮ್ಯಾನ್ ಕೈಂಡ್ ಕ್ಲಬ್ ಅಧ್ಯಕ್ಷ ಅಬ್ದುಲ್ ಸಾಜೀದ್ ಪೊಲೀಸ್ ಸಹಾಯಕ ಸಬ್ ಇನ್ ಸ್ಪೆಕ್ಟರ್ ಟಿ.ಕೆ .ಶಶಿ ಅವರಿಗೆ ಮನವಿ ನೀಡಿ ಮಾತನಾಡಿ ‘ಬಣಕಲ್ ವೃತ್ತ ಇಕ್ಕಟ್ಟು ಜಾಗವಾಗಿದ್ದು ಈ ಭಾಗದಲ್ಲಿ ಅನೇಕ ಶಾಲೆಗಳು,ಸರ್ಕಾರಿ ಕಚೇರಿಗಳು ಇವೆ. ಹಾಗೂ ಪಕ್ಕದಲ್ಲಿ ಮಸೀದಿಯೂ ಇದೆ. ಮತ್ತಿಕಟ್ಟೆ, ಹೆಗ್ಗುಡ್ಲು ಭಾಗಕ್ಕೆ ಸಾಗಲು ಈ ವೃತ್ತದಲ್ಲಿಯೇ ಸಾಗಬೇಕು.ಸೋಮವಾರ ಸಂತೆ ದಿನವಂತೂ ಈ ವೃತ್ತ ಕಿಷ್ಕಿಂಧೆಯಂತೆ ಇರುತ್ತದೆ.ಶಾಲಾ ಮಕ್ಕಳ ವಾಹನಗಳು, ಆಟೋ ಇತರ ವಾಹನಗಳು ಮುಖ್ಯ ರಸ್ತೆಗೆ ಬರಬೇಕಾದರೆ ಹೈರಾಣಾಗಬೇಕಿದೆ.ಪೊಲೀಸ್ ಸಿಬಂದಿಗಳಿದ್ದರೆ ಇಲ್ಲಿ ವಾಹನ ದಟ್ಟಣೆ ತಡೆದು ಸುರಕ್ಷಾ ಕ್ರಮಗಳನ್ನು ಸಾರ್ವಜನಿಕರು ಪಾಲಿಸುವಂತೆ ಮಾಡಬಹುದು. ಮುಖ್ಯ ಹೆದ್ದಾರಿಗೆ ವಾಹನ ಸಂಚಾರ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಬಹುದು.ಟ್ರಾಫಿಕ್ ಜಾಮ್ ಕೂಡ ತಡೆಯಬಹುದು.ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಬಣಕಲ್ ವೃತ್ತಕ್ಕೆ ಖಾಯಂ ಪೊಲೀಸ್ ಸಿಬಂದಿ ನಿಯೋಜಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸದಸ್ಯರಾದ ಪೂರ್ಣೇಶ್ ಹೆಬ್ಬರಿಗೆ,ರಜತ್,ದೀಕ್ಷಿತ್,ಅಬ್ದುಲ್ಲಾ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next