Advertisement

ಕೃಷಿ ಇಲಾಖೆ ಬೆಳೆ ನಷ್ಟ ಸಮೀಕ್ಷೆ

03:59 PM Nov 20, 2021 | Team Udayavani |

ಮಾಗಡಿ: ಕಳೆದ 10 ದಿನಗಳಿಂದಲೂ ಸುರಿಯುತ್ತಿರುವ ಅಕಾಲಿಕ ಮಳೆಗೆ ಅಕ್ಷರಸಃ ರೈತರು ಹೈರಾಣಿ ಹೋಗಿದ್ದಾರೆ. ಈಗಾಗಲೇ ಶೇ.50ರಷ್ಟು ರಾಗಿ ಬೆಳೆ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಕೃಷಿ ಇಲಾಖೆ ವತಿಯಿಂದ ರೈತರ ತಾಕುಗಳಿಗೆ ಭೇಟಿ ನೀಡಿ ರಾಗಿ ಬೆಳೆನಷ್ಟ ಸಮೀಕ್ಷೆ ನಡೆಸುತ್ತಿರುವುದಾಗಿ ಸಹಾಯಕ ಕೃಷಿ ನಿರ್ದೇಶಕ ಎನ್‌.ನರಸಿಂಹಯ್ಯ ತಿಳಿಸಿದರು.

Advertisement

ತಾಲೂಕಿನ ಕುತ್ತಿನಗೆರೆ, ಕಾಜಿಪಾಳ್ಯ ಇತರೆ ಗ್ರಾಮಗಳ ರೈತರ ತಾಕುಗಳಿಗೆ ಭೇಟಿ ನೀಡಿ ರಾಗಿ ಬೆಳೆ ನಷ್ಟ ಕುರಿತು ಸಮೀಕ್ಷೆ ನಡೆಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಪ್ರಮುಖ ಬೆಳೆಯಾಗಿರುವ ರಾಗಿ ಫ‌ಸಲು, ಪ್ರಕೃತಿ ವಿಕೋಪ ಅತಿವೃಷ್ಠಿಯಿಂದ ರಾಗಿ ಬೆಳೆ ಬಹುತೇಕ ನಷ್ಟವಾಗಿದೆ. ರೈತರ ಹೊಲದಲ್ಲಿಯೇ ರಾಗಿ ತೆನೆ ಮೊಳಕೆ ಒಡೆಯುತ್ತಿದೆ. ಬೆಳೆ ನಷ್ಟ ಸಮೀಕ್ಷೆ ಮಾಡುತ್ತಿದ್ದು, ಈ ಅತಿವೃಷ್ಠಿಯಿಂದ ಹಾನಿಗೊಳಗಾಗಿರುವ ರಾಗಿ ಫ‌ಸಲಿನ ಸಮೀಕ್ಷೆ ವರದಿ ತಯಾರಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಲಾಗುವುದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next