Advertisement

ಹೂಳು, ತ್ಯಾಜ್ಯ ನೀರು ತುಂಬಿ ಡೆಂಗ್ಯೂ, ಮಲೇರಿಯಾ ಭೀತಿ

04:18 PM May 24, 2023 | Team Udayavani |

ಬಜಪೆ: ಬಜಪೆ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಕೆಂಜಾರಿನ ಪೊರ್ಕೋಡಿ ಹೊಸಂಗಡಿ ಪ್ರದೇಶದಲ್ಲಿ ಚರಂಡಿಯಲ್ಲಿ ಹೂಳು ಹಾಗೂ ತ್ಯಾಜ್ಯ ನೀರು ತುಂಬಿದ್ದು ಇದರಿಂದಾಗಿ ಅಲ್ಲಿ ಸೊಳ್ಳೆ ಉತ್ಪತ್ತಿಗೆ ಕಾರಣವಾಗಿದೆ. ಈಗಾಗಲೇ ಸೊಳ್ಳೆಯ ಮರಿಗಳು ಕಾಣಿಸಿಕೊಂಡು ಪರಿಸರವಿಡೀ ಸೊಳ್ಳೆಯ ಕಾಟ ದಿಂದಾಗಿ ಡೆಂಗ್ಯೂ ಹಾಗೂ ಮಲೇರಿಯಾ ಬರುವ ಸ್ಥಿತಿಗೆ ಕಾರಣವಾಗಿದೆ.

Advertisement

ಪೊರ್ಕೋಡಿ ಶ್ರೀ ಧೂಮಾವತಿ ದ್ವಾರದ ಬಳಿ ಮನೆ ಗಳಿಂದ ಬರುವ ನೀರು, ಚರಂಡಿಯಲ್ಲಿ ಹೂಳು ಹಾಗೂ ತ್ಯಾಜ್ಯ ತುಂಬಿದ ಕಾರಣ ಹರಿದು ಹೋಗದೇ ಶೇಖರಣೆಯಾಗಿದೆ. ಇನ್ನೊಂದಡೆ ಪೊರ್ಕೋಡಿಯ ಪೇಟೆಯ ತ್ಯಾಜ್ಯ ನೀರು ಚರಂಡಿಯಲ್ಲಿ ಬಂದು ರಿಕ್ಷಾ ಪಾರ್ಕ್‌ ಬಳಿ ಚರಂಡಿಯಲ್ಲಿ ಹೂಳು ಹಾಗೂ ತ್ಯಾಜ್ಯ ತುಂಬಿದ ಕಾರಣ ಮಲಿನ ನೀರು ಹರಿಯದೇ ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾಗಿದೆ.ತ್ಯಾಜ್ಯ ನೀರಿನಲ್ಲಿ ಸೊಳ್ಳೆಯ ಮರಿಗಳು ಉತ್ಪತ್ತಿಯಾಗಿ ರುವ ದೃಶ್ಯ ಮೆಲ್ನೋ ಟಕ್ಕೆ ಕಂಡು ಬರುತ್ತಿದೆ.

ಇಲ್ಲಿಯೇ ಸಮೀಪದಲ್ಲಿ ಬಸ್‌ ತಂಗುದಾಣ, ಅಂಗಡಿಗಳು, ರಿಕ್ಷಾ ಪಾರ್ಕ್‌ಗಳು ಇವೆ. ಪರಿಸರವಿಡೀ ಸೊಳ್ಳೆಯ ಕಾಟವಿದೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ.

ಬಜಪೆ ಪಟ್ಟಣ ಪಂಚಾಯತ್‌ ಹಾಗೂ ಆರೋಗ್ಯ ಇಲಾಖೆ ಈ ಬಗ್ಗೆ ಗಮನ ನೀಡಿ ಚರಂಡಿಯಲ್ಲಿ ತುಂಬಿದ ಹೂಳು ಹಾಗೂ ತ್ಯಾಜ್ಯವನ್ನು ತೆರ ವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕಾಗಿದೆ. ಆಗ ಮಾತ್ರ ಮಲೇರಿಯಾ, ಡೆಂಗ್ಯೂ ಭೀತಿಯಿಂದ ಪಾರಾಗಬಹುದು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ಪರಿಶೀಲಿಸಿ ಕ್ರಮ
ಪೊರ್ಕೋಡಿ ಹೊಸಂಗಡಿ ಪ್ರದೇಶದ ಚರಂಡಿಯಲ್ಲಿ ತ್ಯಾಜ್ಯ ನೀರು ತುಂಬಿ ಸೊಳ್ಳೆ ಉತ್ಪತ್ತಿ ತಾಣವಾಗಿರುವ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ಗುರುರಾಜ್‌,
ಆರೋಗ್ಯ ನಿರೀ ಕ್ಷ ಣಾಧಿಕಾರಿ, ಬಜಪೆ ಪ.ಪಂ.

Advertisement

-ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next