Advertisement

ಅಫ್ಝಲ್‌ ಖಾನ್‌ ಸಮಾಧಿ ಸ್ಥಳದ ಒತ್ತುವರಿ ತೆರವು

07:09 PM Nov 10, 2022 | Team Udayavani |

ಪುಣೆ: ಕರ್ನಾಟಕದ ಬಿಜಾಪುರದ ಅದಿಲ್‌ ಶಾಹಿ ವಂಶಕ್ಕೆ ಸೇರಿದ ಅಫ್ಝಲ್‌ ಖಾನ್‌ ಸಮಾಧಿಯ ಬಳಿ ಇರುವ ಅಕ್ರಮ ಕಟ್ಟಡಗಳನ್ನು ಸತಾರಾ ಜಿಲ್ಲಾಡಳಿತ ತೆರವುಗೊಳಿಸಿದೆ.

Advertisement

ಮಹಾರಾಷ್ಟ್ರ ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರುಚೇಶ್‌ ಜೈವಂಶಿ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫ‌ಡ್ನವೀಸ್‌ “ಇದೊಂದು ಗರ್ವದ ದಿನ’ ಎಂದು ಹೇಳಿದ್ದಾರೆ.

ಸಮಾಧಿಯ ಇರುವ ಸ್ಥಳದ ಸುತ್ತಲಿನ ಪ್ರದೇಶ ಕಂದಾಯ ಮತ್ತು ಅರಣ್ಯ ಇಲಾಖೆಗೆ ಸೇರಿದೆ. ಸರಿ ಸುಮಾರು ಅರ್ಧ ಎಕರೆ ಜಮೀನು ಒತ್ತುವರಿಯಾಗಿತ್ತು. ಅದನ್ನು ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next