Advertisement

ನಿಗದಿಯಂತೆ ಬಸ್‌ ಓಡಿಸಲು ಆಗ್ರಹ

05:44 PM Jul 22, 2022 | Team Udayavani |

ಅಫಜಲಪುರ: ತಾಲೂಕಿನ ವಿವಿಧ ಹಳ್ಳಿಗಳಿಂದ ಬರುವ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ನಿಗದಿಯಂತೆ ಬಸ್‌ ಬರುತ್ತಿಲ್ಲ ಎಂದು ಕೇಂದ್ರ ಬಸ್‌ ನಿಲ್ದಾಣದಲ್ಲಿರುವ ಬಸ್‌ ನಿಲ್ಲಿಸಿ ಸಾರಿಗೆ ಇಲಾಖೆ ನಡೆಗೆ ಬೇಸರ ವ್ಯಕ್ತಪಡಿಸಿದರು.

Advertisement

ತಾಲೂಕಿನ ಬಟಗೇರಾ, ಕೆರಕನಹಳ್ಳಿ, ತೆಲ್ಲೂರ, ಬಿಲ್ವಾಡ(ಕೆ), (ಬಿ) ಮತ್ತು ಆನೂರ ಗ್ರಾಮಗಳಿಂದ ಶಾಲೆ-ಕಾಲೇಜುಗಳಿಗೆ ದಿನನಿತ್ಯ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಪಟ್ಟಣಕ್ಕೆ ಬಂದು ಹೋಗುತ್ತಾರೆ. ಇದರಿಂದಾಗಿ ಬಸ್‌ನಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದೆ. ಅಲ್ಲದೇ ಸಮಯಕ್ಕೆ ಸರಿಯಾಗಿ ಬಸ್‌ ಬರುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇವೆಲ್ಲ ಸಮಸ್ಯೆ ಬಗೆಹರಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಅಫಜಲಪುರ ಮುಖಾಂತರ ದೇವಲ್‌ ಗಾಣಗಾಪುರ ವರೆಗೆ ನಿರಂತರ ಬಸ್‌ ಸಂಚಾರದ ವ್ಯವಸ್ಥೆ ಕಲ್ಪಿಸಬೇಕು ಎಂದು ಕೋರಿದರು.

ಬಸ್‌ ಘಟಕ ವ್ಯವಸ್ಥಾಪಕರು ಸಮಸ್ಯೆ ಆಲಿಸಿ, ಕೆಲ ಸಿಬ್ಬಂದಿ ರಜೆ ಮೇಲಿರುವುದರಿಂದ ಸಮಸ್ಯೆಯಾಗಿದೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next