Advertisement

ಮೀಟರ್‌ ಬಡ್ಡಿ ತಡೆಗೆ ಆಗ್ರಹ

09:25 AM Jun 12, 2018 | |

ಯಾದಗಿರಿ: ಸುರಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಆನಂದರಾವ್‌ ವಿಶ್ವಕರ್ಮ ಎನ್ನುವರು ಮೀಟರ್‌ ಬಡ್ಡಿ
ದಂಧೆಕೋರರ ಉಪಟಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಹಸನಾಪೂರ ಪೆಟ್ರೋಲ್‌ ಪಂಪ್‌ ಹತ್ತಿರ ಅಟೋಮೊಬೈಲ್‌ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಆನಂದರಾವ್‌ ಅವರಿಗೆ ಖಾಸಗಿ ವ್ಯಕ್ತಿಯೊಬ್ಬರು ಸಾಲ ನೀಡಿದ್ದ, ದಿನಾಲೂ ಬಡ್ಡಿಗಾಗಿ ಕಿರುಕುಳ ನೀಡುತ್ತಿದ್ದರಿಂದ ಅವರ ಕಿರುಕುಳ ತಾಳದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ದರಿಂದ ಆರೋಪಿಗಳ ಬಂಧನಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮೃತ ಆನಂದರಾವ್‌ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ದೊರಕಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಹೇಶ ತಡಬಿಡಿ, ದೇವೀಂದ್ರಪ್ಪ ಕನ್ಯಾಕೌಳೂರ, ಯಾದಗಿರಿ ತಾಲೂಕು ಅಧ್ಯಕ್ಷ ಕಾಳಪ್ಪ ದುಪ್ಪಲ್ಲಿ, ಬನ್ನಪ್ಪ ಕಾಳಬೆಳಗುಂದಿ, ಶಂಕರ ಘತ್ತರಗಿ, ರಮೇಶ ಹತ್ತಿಕುಣಿ, ರಾಮಾಚಾರಿ ಚಲ್ಹೇರಿ, ಚಂದ್ರಶೇಖರ ದೋರನಹಳ್ಳಿ, ಶೇಖತಾತಾ ಮುಷ್ಟೂರ, ವಿನೋದ ಪಾಟೀಲ, ಬಸವರಾಜ ಸೈದಾಪುರ, ಮೌನೇಶ ನಾಯ್ಕಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next