Advertisement

ಅಣೆಕಟ್ಟುಗಳ ಬೇಡಿಕೆ ಈಡೇರಿಕೆ: ಬಂಗೇರ

08:53 PM Jun 04, 2019 | Team Udayavani |

ವೇಣೂರು: ಪಶ್ಚಿಮವಾಹಿನಿ ಯೋಜನೆಯಡಿ 6.29 ಕೋಟಿ ರೂ. ವೆಚ್ಚದಲ್ಲಿ ಕುಕ್ಕೇಡಿ ಗ್ರಾ.ಪಂ. ವ್ಯಾಪ್ತಿಯ ನಿಟ್ಟಡೆ ಗ್ರಾಮದ ಕುಕ್ಕುಜೊಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ಬೆಳ್ತಂಗಡಿ ತಾಲೂಕಿನ ಅತೀದೊಡ್ಡ ವೆಂಟೆಡ್‌ ಡ್ಯಾಂ ಕಾಮಗಾರಿಯನ್ನು ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ಮಂಗಳವಾರ ವೀಕ್ಷಿಸಿದರು.

Advertisement

ಬಳಿಕ ಮಾತನಾಡಿದ ಅವರು, ಪಶ್ಚಿಮವಾಹಿನಿ ಯೋಜನೆಯಡಿ ಅಲ್ಲಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಲು ಅವಕಾಶ ಗಳಿದ್ದು, ಬೇಡಿಕೆಗಳಿದ್ದರೆ ಈಡೇರಿಸಲಾ ಗುವುದು. ಡ್ಯಾಂನಲ್ಲಿ ನೀರು ಸಂಗ್ರಹವಾಗಿ ನಿಲ್ಲುವುದರಿಂದ ಅಂತರ್ಜಲ ವೃದ್ಧಿ ಯಾ ಗುತ್ತದೆ. ನೂರಾರು ಮಂದಿ ಕೃಷಿಕರಿಗೆ ಪ್ರಯೋಜನವಾಗುತ್ತದೆ ಎಂದರು. ಬೆಳ್ತಂಗಡಿ ತಾಲೂಕಿನ ಅತೀದೊಡ್ಡ ಡ್ಯಾಂ ಇದಾಗಿದ್ದು, ವಿದ್ಯುತ್‌ ಚಾಲಿತ ಗೇಟ್‌ಗಳನ್ನು ಅಳವಡಿಸಲಾಗುತ್ತದೆ. ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ತೇಜಾಕ್ಷಿ, ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಕೃಷಿ ಭೂಮಿಗೆ ಹಾನಿ?
ನೀರು ಸಂಗ್ರಹವಾಗುವುದರಿಂದ ಕೃಷಿ ಭೂಮಿಗೆ ಹಾನಿಯಾಗುವ ಬಗ್ಗೆ ಸ್ಥಳೀಯ ಕೃಷಿಕರು ಅವಲತ್ತು ಕೊಂಡಾಗ ಪ್ರತಿಕ್ರಿಯಿಸಿದ ಬಂಗೇರ ಅವರು, ಈ ಯೋಜನೆಯಲ್ಲಿ ತಡೆಗೋಡೆ ಕಾಮಗಾರಿ ವಿಸ್ತರಿಸಲು ಆಗುವುದಿಲ್ಲ. ನೀರಿನ ಸಂಗ್ರಹ ಮಟ್ಟ ಆಧರಿಸಿ ತಡೆಗೋಡೆಗೆ ಬೇರೆ ಅನುದಾನಗಳನ್ನು ಇರಿಸಿ ಕಾಮಗಾರಿ ನಡೆಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next