Advertisement
ಪಟ್ಟಣದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ನೂರಾರು ರೈತರು ಜಮಾಯಿಸಿ ನಂತರ ಶ್ರೀ ಬಸವೇಶ್ವರ ವೃತ್ತದ ಮೂಲಕ ಬಸ ನಿಲ್ದಾಣದ ಮಾರ್ಗವಾಗಿ ಮಿನಿ ವಿಧಾನ ಸೌಧಕ್ಕೆ ತೆರಳಿದರು.
ಬಳಿಕ ಪಟ್ಟಣದಲ್ಲಿ ಕಂದಾಯ ಉಪವಿಭಾಗಾಧಿ ಕಾರಿಗಳ ಕಚೇರಿ ಸ್ಥಾಪನೆ ಮಾಡಲಾಗುವುದು ಎಂದು ಶಾಸಕರಾದ ಶಿವಾನಂದ ಪಾಟೀಲ ಹಾಗೂ ಸಂಬಂಧಿಸಿದ ಅಧಿಕಾರಿಗಳು ಭರವಸೆ ನೀಡಿದ್ದರು.
Related Articles
Advertisement
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯ ಸರಕಾರ ತೊಗರಿ ಖರೀದಿ ಕೇಂದ್ರ ಸ್ಥಾಪಿಸಲು ಮುಂದಾಗಿರುವುದು ಸ್ವಾಗತಾರ್ಹ. ಸರಕಾರ ರೈತರು ಬೆಳೆದ ಸಂಪೂರ್ಣ ತೊಗರಿಯನ್ನು ಖರೀದಿಸಬೇಕು. ಅಂದಾಗ ಮಾತ್ರ ರೈತರಿಗೆ ಅನುಕೂಲವಾಗುತ್ತದೆ. ಇಲ್ಲವಾದರೆ ಮತ್ತೆ ರೈತರು ಕಡಿಮೆ ಬೆಲೆಗೆ ತೊಗರಿಯನ್ನು ಮಾರುವ ಸ್ಥಿತಿ ಬಂದೊದಗುತ್ತದೆ. ಆದ್ದರಿಂದ ರಾಜ್ಯ ಸರಕಾರ ಒಬ್ಬ ರೈತರಿಂದ 20 ಕ್ವಿಂಟಲ್ ಬದಲಾಗಿ ರೈತ ಬೆಳೆದ ಸಂಪೂರ್ಣ ತೊಗರಿಯನ್ನು ಖರೀದಿಸಬೇಕು ಎಂದು ಆಗ್ರಹಿಸಿದರು.
ವಿಜಯಪುರ ನಗರ ಘಟಕದ ಅಧ್ಯಕ್ಷ ದೊಂಡಿಬಾ ಪವಾರ ಮಾತನಾಡಿ, ಜಿಲ್ಲಾ ಹಾಗೂ ತಾಲೂಕಿನ ರೈತರಿಗೆ ತಮ್ಮ ಜಮೀನುಗಳಿಗೆ ಹೋಗಲು ದಾರಿ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಆಯಾ ತಾಲೂಕು ತಹಶೀಲ್ದಾರರಿಗೆ ಸಮಸ್ಯೆ ಪರಿಹರಿಸುವ ಅಧಿಕಾರ ನೀಡಬೇಕು. ಅಂದಾಗ ಮಾತ್ರ ರೈತರ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆ ಎಂದರು.
ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ರೈತ ಸಂಘದ ವತಿಯಿಂದ ಧರಣಿ ಮತ್ತು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಮುದ್ದೇಬಿಹಾಳ ತಾಲೂಕಾಧ್ಯಕ್ಷ ಭೀಮಶಿ ಚಲವಾದಿ, ಬಸವನಬಾಗೇವಾಡಿ ತಾಲೂಕಾಧ್ಯಕ್ಷ ರಮೇಶ ರಾಠೊಡ, ರಾಮಚಂದ್ರ ಬೊಮ್ಮನಜೋಗಿ, ಸಿದ್ದರಾಮ ಅಂಗಡಗೇರಿ,ಪರಮಾನಂದ ಮಾಳೂರ, ಸದಾಶಿವ ಪರುಟಗಿ, ಹೊನಕೇರಪ್ಪ ತೆಲಗಿ, ರೇಣುಕಾ ತಳೇವಾರ, ಸುಭಾಸ ನಾಡಗೌಡ, ಗೌರಮ್ಮ ತುಂಬಳಿ, ರೇಣುಕಾ ಹಿಕ್ಕನಗುತ್ತಿ, ಅಪ್ಪಣ್ಣಾ ಪೂಜಾರಿ, ಸೀತವ್ವ ತೋಟದ, ಕಮಲಾ ಸಂಕನಾಳ, ಮಹಾಂತೇಶ ಮಾಳೂರ, ರೇಣುಕಾ ಹರಿಜನ್, ಕಮಲಾ ಹಳ್ಳದಗೇರಿ, ತಿಪ್ಪಣ್ಣ ಹೂಗಾರ, ಲಕ್ಷ್ಮೀಬಾಯಿ ಗೂಡಕಟ್ಟಿ, ಶಾರದಾ ರಾಠೊಡ, ರುದ್ರಪ್ಪ ನಾಡಗೌಡ ಇತರರು ಇದ್ದರು.