Advertisement

ಧಾರವಾಡ –ದಾಂಡೇಲಿ ಬಸ್ ಸಂಚಾರವನ್ನು ಪುನರಾರಂಭಿಸುವಂತೆ ಮನವಿ

08:40 PM Nov 23, 2021 | Team Udayavani |

ದಾಂಡೇಲಿ : ಧಾರವಾಡದಿಂದ ದಾಂಡೇಲಿಗೆ ಪ್ರತಿದಿನ ರಾತ್ರಿ 10.30 ಗಂಟೆಗೆ ಬಿಡಲಾಗುತ್ತಿದ್ದ ಬಸ್ ಸಂಚಾರವನ್ನು ಪುನರಾರಂಭಿಸುವಂತೆ ಗಾಂಧಿನಗರದ ನಿವಾಸಿ ವಿಠ್ಠಲ ಧರೇಕರ ಅವರು ದಾಂಡೇಲಿ ಸಾರಿಗೆ ಘಟಕಕ್ಕೆ ಮಂಗಳವಾರ ಬೆಳಿಗ್ಗೆ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

Advertisement

ಕೋವಿಡ್ ಬರುವ ಮುನ್ನ ಪ್ರತಿದಿನ ರಾತ್ರಿ 10.30 ಗೆ ಧಾರವಾಡದಿಂದ ದಾಂಡೇಲಿಗೆ ಬಸ್ ಸಂಚರಿಸುತ್ತಿತ್ತು. ಕೋವಿಡ್ ನಿಂದಾಗಿ ಸಂಚಾರವನ್ನು ಸ್ಥಗಿತಗೊಳಿಸಲಾದ ನಂತರ ಈವರೇಗೆ ಸಂಚಾರವನ್ನು ಆರಂಭಿಸಲಾಗಿಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಬಾಡಿಗೆ ವಾಹನ ಮಾಡಿಕೊಂಡು ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಪ್ರಯಾಣಿಕರ ಹಿತದೃಷ್ಟಿಯಿಂದ ಈ ಬಸ್ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಿಠ್ಠಲ ಧರೇಕರ ಅವರು ದಾಂಡೇಲಿ ಸಾರಿಗೆ ಘಟಕಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಕ್ಲಬ್ , ರೆಸಾರ್ಟ್‌ ಮೇಲೆ ಪೊಲೀಸರ ದಾಳಿ : 113 ಜನರ ಬಂಧನ, 5.83 ಲಕ್ಷ ರೂ ಜಪ್ತಿ

Advertisement

Udayavani is now on Telegram. Click here to join our channel and stay updated with the latest news.

Next