Advertisement

ಎಂಇಎಸ್‌ ಸಂಘಟನೆ ನಿಷೇಧಕ್ಕೆ  ಆಗ್ರಹ

09:44 PM Dec 30, 2021 | Girisha |

ವಿಜಯಪುರ: ಕರ್ನಾಟಕದಲ್ಲಿ ಭಾಷೆಯ ಹಸರಿನದಲ್ಲಿ ಸಾಮರಸ್ಯ ಹಾಳು ಮಾಡುತ್ತಿರುವ ಎಂಇಎಸ್‌ ನಿಷೇಧಕ್ಕೆ ಆಗ್ರಹಿಸಿ ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

Advertisement

ಮುನ್ನೆಚ್ಚಿಕೆ ಕ್ರಮವಾಗಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ, ಎಂಇಎಸ್‌ ಪುಂಡಾಟಿಕೆ ಹದ್ದು ಮೀರಿದೆ. ಸಹನಾಮೂರ್ತಿಗಳಾದ ಕನ್ನಡಿಗರನ್ನು ವಿನಾಕಾರಣ ಕೆಣಕುತ್ತಿದೆ. ಭಾಷೆಯ ಹೆಸರಿನಲ್ಲಿ ಕರ್ನಾಟಕದಲ್ಲಿ ಸಾಮಾಜಿಕ ಸ್ವಾಸ್ಥ Â ಹಾಳು ಮಾಡುತ್ತಿರುವ ಎಂಇಎಸ್‌ ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಕನ್ನಡ ಭಾಷೆ, ನಾಡು-ನುಡಿಗೆ ಅಪಮಾನ ಮಾಡುತ್ತಿದೆ, ಇದು ಅಕ್ಷಮ್ಯ ಅಪರಾಧ, ಆದರೆ ಸರ್ಕಾರ ಮಾತ್ರ ಎಂಇಎಸ್‌ ಮೇಲೆ ಕ್ರಮ ಕೈಗೊಳ Ûಲದೇ ಮೌನವಾಗಿರುವುದು ರಣಹೇಡಿತನಕ್ಕೆ ಸಾಕ್ಷಿಯಾಗಿದೆ. ಒಂದು ರೀತಿ ಈ ವಿಷಯದಲ್ಲಿ ಸರ್ಕಾರ ಕಿವಿ ಇಲ್ಲದಂತೆ ವರ್ತನೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಕಾಶ ಕುಂಬಾರ ಮಾತನಾಡಿ, ಮಹಾರಾಷ್ಟ್ರ ಏಕೀಕರಣ ಸಮಿತಿ ಭಾವೈಕ್ಯತೆ, ಭಾಷಾ ಸಾಮರಸ್ಯಕ್ಕೆ ಹುಳಿ ಹಿಂಡುವ ಕೆಲಸ ಮಾಡುತ್ತಿದೆ.

ಈ ಏಕೀಕರಣ ಸಮಿತಿ ರಾಜ್ಯಕ್ಕೆ ಏಕೆ ಬೇಕು? ಕೂಡಲೇ ಈ ಸಂಘಟನೆಯನ್ನು ಮಟ್ಟ ಹಾಕಿ ಎಂದು ಒತ್ತಾಯಿಸಿದರು. ಪವಿತ್ರ ಕನ್ನಡ ನಾಡಿನಲ್ಲಿ ಕನ್ನಡಿಗರೇ ಸಾರ್ವಭೌಮ, ಕನ್ನಡವೇ ಇಲ್ಲಿ ಸಾರ್ವಭೌಮ ಭಾಷೆ, ಜೀವದ ಭಾಷೆ ಎಂದರು. ಸಂಘಟನೆಯ ಪ್ರಮುಖರಾದ ಮಹಾದೇವ್‌ ರಾವಜಿ, ಫಯಾಜ್‌ ಕಲಾದಗಿ, ದಸಗೀÃ ¤ ‌ ಸಾಲೋಟಗಿ, ವಿನೋದ ದಳವಾಯಿ, ಬಸವರಾಜ ಕಾತ್ರಾ ಮಡಿವಾಳರ, ಮುತ್ತಗಿ, ಮನೋಹರ, ಆಸೀಪ್‌ ಪೀರಜಾದೆ, ರವಿ ಬಗಲಿ ಪಾಲ್ಗೊಂಡಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next