Advertisement

ಮಿಂಚಿದ ಸುದ್ದಿ : ಕುದುರೆ ಏರಿ ಬಂದ ಡೆಲಿವರಿ ಬಾಯ್‌!

01:31 AM Jan 14, 2021 | Team Udayavani |

ಶ್ರೀನಗರ : ಶ್ರೀನಗರ ಸೇರಿದಂತೆ ಜಮ್ಮು-ಕಾಶ್ಮೀರದ ಹಲವು ಭಾಗಗಳಲ್ಲಿ ಹಿಮ ಮಳೆಯು ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ವಾಹನಗಳು, ವಿಮಾನಗಳ ಸಂಚಾರಕ್ಕೂ ಮಂಜಿನ ಧಾರೆಯಿಂದ ತೊಂದರೆಯಾಗಿದೆ. ಪರಿಸ್ಥಿತಿ ಹೀಗಿರುವಾಗಲೂ ಆನ್‌ಲೈನ್‌ ಡೆಲಿವರಿ ನೀಡುವ ಯುವಕನೊಬ್ಬ ತನ್ನ ಕರ್ತವ್ಯವನ್ನು ಪೂರೈಸಿದ ಪರಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ನಿರಂತರ ಹಿಮ ಸುರಿಯುತ್ತಿರುವ ಕಾರಣ ಬೈಕ್‌ನಲ್ಲಿ ಬರಲು ಸಾಧ್ಯವಾಗದೇ, ಈ ಡೆಲಿವರಿ ಬಾಯ್‌ ಕುದುರೆಯನ್ನೇರಿ ಬಂದಿದ್ದಾನೆ. ಕೊರೆಯುವ ಚಳಿ, ಮಂಜಿನ ಮಳೆಯ ನಡುವೆಯೇ ಕುದುರೆ ಸವಾರಿ ಮಾಡುತ್ತಾ ಬಂದ ಯುವಕ, ಗ್ರಾಹಕರಿಗೆ ಆಹಾರದ ಪಾರ್ಸೆಲ್‌ ಕೊಟ್ಟು ಮರಳಿದ್ದಾನೆ. ಈ ವೀಡಿಯೋ ವೈರಲ್‌ ಆಗಿದ್ದು, ಯುವಕನ ಬದ್ಧತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next