Advertisement

‘ಕೇಂದ್ರ ಸರಕಾರದ ಸಾಧನೆಗಳನ್ನು ಮತದಾರರಿಗೆ ತಲುಪಿಸಿ’

12:37 PM Apr 27, 2018 | Team Udayavani |

ಮೂಲ್ಕಿ: ರಾಜ್ಯ ಸರಕಾರದ ದುರಾಡಳಿತ, ವೈಫಲ್ಯಗಳನ್ನು ಮತ್ತು ಕೇಂದ್ರ ಸರಕಾರದ ಉತ್ತಮ ಕಾರ್ಯಗಳ ಸಾಧನೆಯನ್ನು ತಳ ಮಟ್ಟದ ಕಾರ್ಯಕರ್ತರು ಮತದಾರರಿಗೆ ಮುಟ್ಟಿಸುವ ಕೆಲಸ ಮಾಡಿದಾಗ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸರಕಾರವನ್ನು ಪೂರ್ಣ ಬಹುಮತದಿಂದ ತರಲು ಸಾಧ್ಯ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್‌ ಚೌಟ ಹೇಳಿದರು.

Advertisement

 ಕಾರ್ನಾಡು ಸದಾಶಿವ ರಾವ್‌ ನಗರದಲ್ಲಿ ಗುರುವಾರ ಕಾರ್ಯಕರ್ತರ ಮನೆಯಲ್ಲಿ ನಡೆದ ಗ್ರಾಮ ಪ್ರವಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಕ್ಷದ ಅಭ್ಯರ್ಥಿ ಉಮಾನಾಥ ಕೋಟ್ಯಾನ್‌ ಅವರು ಒರ್ವ ಉತ್ತಮ ವ್ಯಕ್ತಿ ಅವರ ಮೂಲಕ ಜನರಿಗೆ ನ್ಯಾಯಯುತವಾದ ಆಡಳಿತ ಮತ್ತು ಸಹಾಯ ಪೂರ್ಣ ಪ್ರಮಾಣದಲ್ಲಿ ಸಿಗಬಲ್ಲದು. ಈ ಬಾರಿ ಮೂಲ್ಕಿಯಲ್ಲಿ ಮಾತ್ರವಲ್ಲ ರಾಜ್ಯದಲ್ಲಿಯೇ ಬದಲಾವಣೆಯ ಗಾಳಿ ಎದ್ದಿದೆ ಎಂದು ಅವರು ಹೇಳಿದರು.

ಅಭ್ಯರ್ಥಿ ಉಮಾನಾಥ್‌ ಕೋಟ್ಯಾನ್‌ ಮಾತನಾಡಿ, ನಿಮ್ಮ ಶ್ರಮದ ಫಲವಾಗಿ ನನ್ನ ಗೆಲುವು ಸಾಧ್ಯ ಎಂಬ ಎಲ್ಲ ಸೂಚನೆಗಳು ಮತ್ತು ಜನರ ಬೆಂಬಲ ನನಗೆ ಗೆಲುವಿನ ಭರವಸೆಯನ್ನು ತುಂಬಿದೆ ಎಂದು ಹೇಳಿದರು.

ಪಕ್ಷದ ಮುಖಂಡರಾದ ಕಸ್ತೂರಿ ಪಂಜ, ಸುನೀಲ್‌ ಆಳ್ವ, ಮೇಘನಾಥ ಶೆಟ್ಟಿ, ಚಂದ್ರಶೇಖರ ಆಚಾರ್‌, ಜಯಾನಂದ ಮೂಲ್ಕಿ, ರಂಗನಾಥ ಶೆಟ್ಟಿ, ನರಸಿಂಹ ಪೂಜಾರಿ, ಸತ್ಯೇನ್ದ್ರ  ಶೆಣೈ, ವಿಶ್ವಾಸ್‌, ರಮೇಶ್‌, ಭಾಗ್ಯರಾಜ್‌, ವೀರಣ್ಣ ಅರಳಗುಂಡಿ, ಸಂತೋಷ್‌, ಸತೀಶ್‌ ಅಂಚನ್‌, ಬೋಜರಾಜ ಶೆಟ್ಟಿ, ರವೀಂದ್ರ ಶೆಟ್ಟಿ, ಶಂಕರವ್ವ, ವಿಟ್ಠಲ ಎಂ., ಮೇಘನಾಥ ಶೆಟ್ಟಿ, ಶೈಲೇಶ್‌ ಕುಮಾರ್‌, ಶಾಂತಾ ಕಿರೋಡಿಯನ್‌ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next