Advertisement

ಲಂಡನ್‌ನಲ್ಲಿ ಖಲಿಸ್ತಾನಿ ಬೆಂಬಲಿಗರ ಕುಕೃತ್ಯ: ದೆಹಲಿ ಯುಕೆ ಮಿಷನ್ ಹೊರಗೆ ಪ್ರತಿಭಟನೆ

07:39 PM Mar 20, 2023 | Team Udayavani |

ನವದೆಹಲಿ : ಸಿಖ್ ಸಮುದಾಯದವರು ಹೊಸದಿಲ್ಲಿಯಲ್ಲಿರುವ ಯುಕೆ ಹೈಕಮಿಷನ್‌ನ ಹೊರಗೆ ಜಮಾಯಿಸಿ, ಲಂಡನ್‌ನಲ್ಲಿರುವ ಇಂಡಿಯನ್ ಮಿಷನ್‌ನಲ್ಲಿ ಖಲಿಸ್ತಾನ್ ಪರ ಬೆಂಬಲಿಗರಿಂದ ವಿಧ್ವಂಸಕ ಕೃತ್ಯಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.

Advertisement

ರಾಷ್ಟ್ರ ರಾಜಧಾನಿಯಲ್ಲಿ ಸಿಖ್ ಸಮುದಾಯದ ಯೋಜಿತ ಪ್ರತಿಭಟನೆಗೆ ಮುಂಚಿತವಾಗಿ ಯುಕೆ ಮಿಷನ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಭಾನುವಾರ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಮೇಲೆ ಹಾರುತ್ತಿದ್ದ ತ್ರಿವರ್ಣ ಧ್ವಜವನ್ನು ಹಿಡಿದು ಪ್ರತ್ಯೇಕತಾವಾದಿ ಖಲಿಸ್ತಾನಿ ಧ್ವಜಗಳನ್ನು ಬೀಸುವ ಮತ್ತು ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗಿದ ಖಲಿಸ್ತಾನ್ ಪರ ಬೆಂಬಲಿಗರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.

ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ, ಇಂತಹ ಭಾರತ ವಿರೋಧಿ ಘಟನೆಗಳ ವಿರುದ್ಧ ಅಂತಾರಾಷ್ಟ್ರೀಯ ಸಿಖ್ ಸಮುದಾಯವು ನಿಲ್ಲುವಂತೆ ಮನವಿ ಮಾಡಿದರು. ಖಲಿಸ್ತಾನಿ ಬೆಂಬಲಿಗರಿಗೆ ಸಂದೇಶವನ್ನು ರವಾನಿಸಿ “ಸಿಖ್ಖರು ಭಾರತವನ್ನು ಪ್ರೀತಿಸುತ್ತಾರೆ” ಎಂದರು. ಭಾರತೀಯ ಧ್ವಜಕ್ಕೆ ಅಗೌರವ ತೋರುವವರ ವಿರುದ್ಧ ಬ್ರಿಟಿಷ್ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next