Advertisement

Delhi Rains: ನೆರೆ ನೀರಿನಲ್ಲಿ ಆಡಲು ಹೋಗಿ 3 ಮಕ್ಕಳು ನೀರುಪಾಲು

06:52 PM Jul 14, 2023 | Team Udayavani |

ಹೊಸದಿಲ್ಲಿ: ಈಶಾನ್ಯ ದೆಹಲಿಯಲ್ಲಿ ಶುಕ್ರವಾರ ಮೂವರು ಬಾಲಕರು ಪ್ರವಾಹದಲ್ಲಿ ಈಜಲು ಪ್ರಯತ್ನಿಸುತ್ತಿದ್ದಾಗ ನೀರುಪಾಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಈಶಾನ್ಯ ದೆಹಲಿಯ ಮುಕುಂದಪುರ ನೆರೆಹೊರೆಯಲ್ಲಿರುವ ಮೆಟ್ರೋ ನಿರ್ಮಾಣ ಸ್ಥಳದಲ್ಲಿ ಸಂಜೆ 4:30 ರ ಸುಮಾರಿಗೆ ಸ್ನಾನಕ್ಕಾಗಿ ಬಾಲಕರು ಪ್ರವಾಹದ ನೀರಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಅವರನ್ನು ಮೇಲಕ್ಕೆತ್ತಿ ಬಿಜೆಆರ್‌ಎಂ ಆಸ್ಪತ್ರೆಗೆ ತರಲಾಗಿದ್ದು ಮೂವರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಬಾಲಕರನ್ನು ಪಿಯೂಷ್ (13), ನಿಖಿಲ್ (10) ಮತ್ತು ಆಶಿಶ್ (13) ಎಂದು ಗುರುತಿಸಲಾಗಿದೆ. ಅವರೆಲ್ಲರೂ ಜಹಾಂಗೀರ್ಪುರಿ ಎಚ್-ಬ್ಲಾಕ್ ನಿವಾಸಿಗಳಾಗಿದ್ದಾರೆ.

ನಿರಂತರ ಮಳೆಯ ನಂತರ ಯಮುನಾ ನದಿಯು 45 ವರ್ಷಗಳಲ್ಲೇ ಅತ್ಯಂತ ಅಪಾಯಕಾರಿ ಮಟ್ಟವನ್ನು ದಾಟಿದೆ, ದೆಹಲಿಯ ಹಲವಾರು ಪ್ರದೇಶ ಜಲಾವೃತವಾಗಿದೆ. ದೆಹಲಿ ಸರಕಾರ, ಸೇನಾ ಪಡೆಗಳು ಮತ್ತು ವಿಪತ್ತು ಪ್ರತಿಕ್ರಿಯೆ ಪಡೆಯ ಸದಸ್ಯರು ನದಿಯ ಐದು ಗೇಟ್‌ಗಳನ್ನು ತೆರೆಯಲು ವಿಫಲ ಯತ್ನ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next