Advertisement

ದಿಲ್ಲಿ: ಮುಂದುವರಿದ ಜಡಿ ಮಳೆ, ಕೃತಕ ನೆರೆ, ಜನ,ವಾಹನ ಸಂಚಾರ ಬಾಧಿತ

11:24 AM Jul 27, 2018 | Team Udayavani |

ಹೊಸದಿಲ್ಲಿ : ದಿಲ್ಲಿ ಹಾಗೂ ನೆರೆಯ ನೋಯ್ಡಾ, ಗುರುಗ್ರಾಮ ಮತ್ತು ಫ‌ರೀದಾಬಾದ್‌ ನಿನ್ನೆ ಗುರುವಾರ ಜಡಿಮಳೆ ಕಂಡ ಕಾರಣ ತೀವ್ರವಾಗಿ ಜನಜೀವನ ಹಾಗೂ ವಾಹನ ಸಂಚಾರ ಬಾಧಿತವಾಗಿದ್ದು ಇಂದು ಶುಕ್ರವಾರ ರಾಷ್ಟ್ರ ರಾಜಧಾನಿ ಎನ್‌ಸಿಆರ್‌ ಪ್ರದೇಶದಲ್ಲಿ ಕಾರ್ಮೋಡಗಳು ಮುಸುಕಿರುವ ಹಿನ್ನೆಲೆಯಲ್ಲಿ ಇಂದು ಕೂಡ ಜಡಿಮಳೆಯಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ ಮತ್ತು ಯಮುನಾ ನದಿ ಅತ್ಯಧಿಕ ಮಟ್ಟವನ್ನು ತಲುಪಿರುವುದು ಕಳವಳಕ್ಕೆ ಕಾರಣವಾಗಿದೆ ಎಂದು ವರದಿಗಳು ತಿಳಿಸಿವೆ.

Advertisement

ಈ ವಾರಾಂತ್ಯದ ವರೆಗೂ ದಿಲ್ಲಿ ಹಾಗೂ ನೆರೆಯ ಪ್ರದೇಶಗಳಲ್ಲಿ ಜಡಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. 

ನಿನ್ನೆಯ ಜಡಿ ಮಳೆಗೆ ದಿಲ್ಲಿಯ ತಗ್ಗು ಪ್ರದೇಶಗಳಲ್ಲಿ ನೀರಿನಿಂದ ತುಂಬಿದ್ದು ವಾಹನ ಮತ್ತು ಜನ ಸಂಚಾರ ತೀವ್ರವಾಗಿ ಬಾಧಿತವಾಗಿತ್ತು. ದಿಲ್ಲಿಯ ಅನೇಕ ಪ್ರದೇಶಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಕೃತಕ ನೆರೆ ಬಹುತೇಕ ಕಡೆಗಳಲ್ಲಿ ಕಂಡು ಬಂದಿತ್ತು. 

ಇಂದು ಶುಕ್ರವಾರ ಕೂಡ ದಿಲ್ಲಿಯ ಬಹುತೇಕ ಪ್ರದೇಶಗಳು ನೀರಿನಿಂದ ತುಂಬಿಕೊಂಡಿರುವುದು ಕಂಡು ಬಂದಿದೆ. ಎನ್‌ಸಿಆರ್‌ ಆದ್ಯಂತ ನಾಗರಿಕ ಸೌಕರ್ಯಗಳು ತೀವ್ರವಾಗಿ ಬಾಧಿತವಾಗಿವೆ. 

Advertisement

Udayavani is now on Telegram. Click here to join our channel and stay updated with the latest news.

Next