Advertisement

ಅಮಾನವೀಯ! ದೆಹಲಿಯಲ್ಲಿ ನಾಯಿ, ಮಾಲಕಿಗೆ ಕಬ್ಬಿಣದ ರಾಡ್‌ನಿಂದ ಥಳಿತ

09:24 PM Jul 04, 2022 | Team Udayavani |

ನವದೆಹಲಿ: ಪಶ್ಚಿಮ್ ವಿಹಾರ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ನಾಯಿ ಬೊಗಳಿತು ಮತ್ತು ಕಚ್ಚಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಕುಟುಂಬದ ಮೂವರು ಸದಸ್ಯರು ಮತ್ತು ಅವರ ಸಾಕು ನಾಯಿಯ ಮೇಲೆ ದಾಳಿ ಮಾಡಿದ್ದಾನೆ. ವರದಿಗಳ ಪ್ರಕಾರ, ವ್ಯಕ್ತಿ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದರಿಂದ ಮಾಲಕಿ ಮತ್ತು ನಾಯಿಗೆ ಗಾಯಗಳಾಗಿವೆ.

Advertisement

ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋವನ್ನು ಇಂದು ಬೆಳಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ನೆಟಿಜನ್‌ಗಳ ಆಕ್ರೋಶಕ್ಕೆ ಕಾರಣವಾಗಿದೆ.

ಧರ್ಮವೀರ್ ದಹಿಯಾ ಎಂದು ಗುರುತಿಸಲಾದ ವ್ಯಕ್ತಿ ಮೊದಲು ಮಹಿಳೆಯನ್ನು ಥಳಿಸಿ ನಂತರ ನಾಯಿ ಮತ್ತು ವ್ಯಕ್ತಿಯನ್ನು ರಾಡ್‌ನಿಂದ ಹೊಡೆಯುತ್ತಿರುವುದು ಕಂಡುಬಂದಿದೆ.

ಮಾಧ್ಯಮ ವರದಿಗಳ ಪ್ರಕಾರ, ದಹಿಯಾ ಅವರು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನಾಯಿಯು ಬೊಗಳಿದಾಗ ಅದರ ಬಾಲವನ್ನು ಹಿಡಿದು ನಾಯಿಯನ್ನು ಎಸೆದಿದ್ದಾನೆ. ನಂತರ, ನಾಯಿಯನ್ನು ಸಾಕಿದ್ದ ರಕ್ಷಿತ್ ನಾಯಿಯನ್ನು ರಕ್ಷಿಸಲು ಮಧ್ಯದಲ್ಲಿ ಬಂದಿದ್ದು, ಈ ಜಗಳದ ವೇಳೆ ದಹಿಯಾಗೆ ನಾಯಿ ಕಚ್ಚಿದೆ ಎನ್ನಲಾಗಿದೆ.

ನಂತರ, ದಹಿಯಾ ನಾಯಿ ಮಾಲೀಕರ ಮನೆಗೆ ಮರಳಿದ್ದು, ಗದ್ದಲ ಏನೆಂದು ನೋಡಲು ನೆರೆಹೊರೆಯವರು ಶೀಘ್ರದಲ್ಲೇ ಹೊರಬಂದರು. ನಾಯಿಯ ಮಾಲೀಕರು ಎಫ್‌ಐಆರ್ ದಾಖಲಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಯಿಯ ತಲೆಯಲ್ಲಿ ಹೆಪ್ಪುಗಟ್ಟುವಿಕೆ ಇದೆ ಮತ್ತು ಪಶುವೈದ್ಯರ ಬಳಿಗೆ ಕರೆದೊಯ್ಯಲಾಗುತ್ತದೆ ಎಂದು ತಿಳಿದು ಬಂದಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next