Advertisement

ಚಿತ್ರಾ ರಾಮಕೃಷ್ಣ ಕೇಸ್‌: ಸಿಬಿಐಗೆ ನೋಟಿಸ್‌ ನೀಡಿದ ದೆಹಲಿ ಹೈಕೋರ್ಟ್‌

07:41 PM May 20, 2022 | Team Udayavani |

ನವದೆಹಲಿ: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್‌ಎಸ್‌ಇ) ಹಗರಣ ಪ್ರಮುಖ ಆರೋಪಿ ಚಿತ್ರಾ ರಾಮಕೃಷ್ಣ ಅವರ ಜಾಮೀನು ಅರ್ಜಿ ಕುರಿತಾಗಿ ಕೇಂದ್ರೀಯ ತನಿಖಾ ದಳ(ಸಿಬಿಐ)ಕ್ಕೆ ದೆಹಲಿ ಹೈಕೋರ್ಟ್‌ ಶುಕ್ರವಾರ ನೋಟಿಸ್‌ ಕೊಟ್ಟಿದೆ.

Advertisement

ಎನ್‌ಎಸ್‌ಇ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಮತ್ತು ವ್ಯವಸ್ಥಾಪಕಾ ನಿರ್ದೇಶಕಿ(ಎಂಡಿ) ಆಗಿರುವ ಚಿತ್ರಾ ಅವರ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯವು ಮೇ 12ರಂದು ತಿರಸ್ಕರಿಸಿತ್ತು.

ಅವರ ವಿರುದ್ಧ ಆರೋಪ ಮತ್ತು ಸಾಕ್ಷಿಗಳು ಬಲವಾಗಿರುವ ಕಾರಣ ಅವರಿಗೆ ಜಾಮೀನು ನೀಡಲಾಗದು ಎಂದು ನ್ಯಾಯಾಲಯ ಹೇಳಿತ್ತು. ಈ ವಿಚಾರವಾಗಿ ಚಿತ್ರಾ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ:ಮೇ 21 ರಿಂದ 2 ದಿನಗಳ ಗೃಹ ಸಚಿವ ಅಮಿತ್‌ ಶಾ ಅರುಣಾಚಲ ಪ್ರವಾಸ

ವಿಚಾರಣಾ ನ್ಯಾಯಾಲಯದಲ್ಲಿ ಇನ್ನೂ ಒಂದು ಜಾಮೀನು ಅರ್ಜಿ ಇರುವುದನ್ನು ಗಮನಿಸಿರುವ ಹೈಕೋರ್ಟ್‌, ಸೂಕ್ತ ಅನುಮತಿ ಇಲ್ಲದೆಯೇ ಚಾರ್ಜ್‌ಶೀಟ್‌ ಸಲ್ಲಿಸಿರುವುದನ್ನೂ ಗಮನಿಸಿದೆ.

Advertisement

ಮುಂದಿನ ವಿಚಾರಣೆಯನ್ನು ಮೇ 31ಕ್ಕೆ ನಡೆಸುವುದಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next