Advertisement

ದಿಲ್ಲಿ: ನೇಣಿಗೆ ಶರಣಾದ ವೈದ್ಯ, ಸಾವಿಗೆ ಆಪ್ ಶಾಸಕ ಕಾರಣ ಎಂದು ಆರೋಪ: ಪೊಲೀಸ್

09:12 AM Apr 19, 2020 | Nagendra Trasi |

ನವದೆಹಲಿ: ಆಮ್ ಆದ್ಮಿ ಪಕ್ಷದ ಶಾಸಕರೊಬ್ಬರ ಕಿರುಕುಳದಿಂದ ಬೇಸತ್ತು ವೈದ್ಯರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ದಿಲ್ಲಿ ಪೊಲೀಸರು ಶನಿವಾರ ತಿಳಿಸಿದ್ದಾರೆ.

Advertisement

ಆತ್ಮಹತ್ಯೆಗೆ ಶರಣಾಗಿರುವ 52ವರ್ಷದ ವೈದ್ಯರು ಸಾಯುವ ಮುನ್ನ ಬರೆದಿಟ್ಟ 2 ಪುಟಗಳ ಪತ್ರದಲ್ಲಿ, ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಶಾಸಕರ ವಿರುದ್ದ ಆರೋಪಿಸಿದ್ದಾರೆ. ಅವರ ಸಹವರ್ತಿಗಳು ತನ್ನಿಂದ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಿದ್ದು, ನನ್ನ ವ್ಯವಹಾರದಲ್ಲಿ ಮಧ್ಯಪ್ರವೇಶಿಸುತ್ತಿದ್ದು, ತಾನು ಹಣ ಕೊಡಲು ನಿರಾಕರಿಸಿರುವುದಾಗಿ ಆರೋಪಿಸಿದ್ದಾರೆ ಎಂದು ವರದಿ ತಿಳಿಸಿದೆ.

ದೆಹಲಿಯ ನೇಬ್ ಸರಾಯ್ ಪ್ರದೇಶದ ನಿವಾಸಿ ರಾಜೇಂದ್ರ ಸಿಂಗ್ ನೇಣಿಗೆ ಶರಣಾಗಿದ್ದು, ಇವರು ಸ್ವಂತ ವಾಟರ್ ಟ್ಯಾಂಕರ್ ಸರ್ವಿಸ್ ಹೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಾಡಿಗೆ ಮನೆಯಲ್ಲಿರುವ ವೈದ್ಯರು ತಮ್ಮ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.

ತನ್ನ ಸಾವಿಗೆ ಶಾಸಕ ಪ್ರಕಾಶ್ ಜಾರ್ವಾಲ್ ಹಾಗೂ ಆತನ ಸಹವರ್ತಿ ಕಪಿಲ್ ಎಂಬಾತ ಕಾರಣ ಎಂದು ಎರಡು ಪುಟಗಳ ಸೂಸೈಡ್ ನೋಟ್ ನಲ್ಲಿ ಬರೆದಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next