Advertisement

ಎನ್‌ ಡಿ ತಿವಾರಿ ಪುತ್ರ ರೋಹಿತ್‌ ಶೇಖರ್‌ ಸಾವಿನ ತನಿಖೆ ಕ್ರೈಂ ಬ್ರಾಂಚಿಗೆ ವರ್ಗಾವಣೆ

09:03 AM Apr 20, 2019 | Team Udayavani |

ಹೊಸದಿಲ್ಲಿ : ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌ ಡಿ ತಿವಾರಿ ಅವರ ಪುತ್ರ ರೋಹಿತ್‌ ಶೇಖರ್‌ ತಿವಾರಿ ಅವರ ಸಾವಿನ ತನಿಖೆಯನ್ನು ಇಂದು ಶುಕ್ರವಾರ ಕ್ರೈಂ ಬ್ರಾಂಚಿಗೆ ವರ್ಗಾಯಿಸಲಾಗಿದೆ.

Advertisement

ಫೊರೆನ್ಸಿಕ್‌ ಮತ್ತು ಕ್ರೈಂ ಬ್ರಾಂಚ್‌ ತಂಡಗಳು ದಿಲ್ಲಿಯಲ್ಲಿನ ಡಿಫೆನ್ಸ್‌ ಕಾಲನಿಯಲ್ಲಿರುವ ತಿವಾರಿ ನಿವಾಸಕ್ಕೆ ತನಿಖೆಗಾಗಿ ಭೇಟಿ ನೀಡಿವೆ.

ಕಳೆದ ಮಂಗಳವಾರ ರೋಹಿತ್‌ ಅವರ ನಿಧನ ಹೊಂದಿದ್ದ ಸ್ಥಿತಿಯಲ್ಲಿ ದಿಲ್ಲಿಯ ಮ್ಯಾಕ್ಸ್‌ ಆಸ್ಪತ್ರೆಗೆ ತರಲಾಗಿತ್ತು. ದಕ್ಷಿಣ ದಿಲ್ಲಿಯ ಡಿಸಿಪಿ ವಿಜಯ್‌ ಕುಮಾರ್‌ ಅವರು ಈ ವಿಷಯವನ್ನು ದೃಢಪಡಿಸಿದ್ದರು.

ರೋಹಿತ್‌ ತಿವಾರಿ ಅವರ ದೇಹದ ಮೇಲೆ ಯಾವುದೇ ಗಾಯಗಳಿರಲಿಲ್ಲ; ಹಾಗಾಗಿ ಮರಣೋತ್ತರ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next