Advertisement

Officers ವರ್ಗಾವಣೆ ವಿಳಂಬ: ಮಹಾ ಸರಕಾರಕ್ಕೆ ಚುನಾವಣ ಆಯೋಗ ತರಾಟೆ

11:42 PM Sep 27, 2024 | Team Udayavani |

ಮುಂಬಯಿ: ಮಹಾರಾಷ್ಟ್ರ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಚುನಾವಣ ಆಯೋಗ ನಿರ್ದೇಶಿಸಿದ್ದನ್ನು ಪಾಲಿಸದ ಮಹಾ ರಾಷ್ಟ್ರ ಆಡಳಿತವನ್ನು ಆಯೋಗವು ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ. 3 ವರ್ಷಗಳಿಗಿಂತ ಹೆಚ್ಚು ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸಿರುವ ಅಧಿಕಾರಿಗಳು ವರ್ಗಾವಣೆ ಮಾಡುವಂತೆ ಜು. 31ರಂದೇ ಆದೇಶ ನೀಡಿದ್ದರೂ, 100ಕ್ಕೂ ಹೆಚ್ಚು ಇನ್‌ಸ್ಪೆಕ್ಟರ್‌ಗಳು ಅದೇ ಸ್ಥಾನದಲ್ಲಿರಲು ಕಾರಣವೇನು ಎಂದು ಆಯೋಗ ಪ್ರಶ್ನಿಸಿದೆ. ವರದಿ ಸಲ್ಲಿಸುವಂತೆ ಚುನಾವಣ ಆಯೋ ಗವು ಮಹಾರಾಷ್ಟ್ರ ಸರಕಾರ ಹಾಗೂ ಪೊಲೀಸ್‌ ಮಹಾ­ನಿರ್ದೇಶಕರಿಗೆ ಸೂಚನೆ ನೀಡಿದೆ. ಜತೆಗೆ ನ್ಯಾಯಸಮ್ಮತ ಚುನಾವಣೆ ನಡೆಯಲು ಹೊರರಾಜ್ಯ ದಿಂದ ಬರುವ ಅಕ್ರಮ ಮದ್ಯದ ಹರಿವು ತಡೆವಂತೆ ಅಬಕಾರಿ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next