Advertisement

Israel-Hamas War ಭಾರತೀಯರ ರಕ್ಷಣೆ: ಕೇಂದ್ರ ಬದ್ಧ: ಶಾಸಕ ಯಶ್‌ಪಾಲ್‌

11:34 PM Oct 13, 2023 | Team Udayavani |

ಉಡುಪಿ: ಬಿಷಪ್‌ ರೈ| ರೆ| ಡಾ| ಜೆರಾಲ್ಡ್ ಐಸಾಕ್‌ ಲೋಬೋ ಅವರನ್ನು ಶಾಸಕ ಯಶ್‌ಪಾಲ್‌ ಎ. ಸುವರ್ಣ ಭೇಟಿ ಮಾಡಿ ಇಸ್ರೇಲ್‌ನಲ್ಲಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರಕಾರ ಬದ್ಧವಾಗಿದೆ ಎಂದು ತಿಳಿಸಿದರು.

Advertisement

ಇಸ್ರೇಲ್‌ ಹಮಾಸ್‌ ಉಗ್ರರ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಆಪರೇಶನ್‌ ಅಜಯ್‌ ಮೂಲಕ ಭಾರತೀಯರನ್ನು ತಾಯ್ನಾಡಿಗೆ ಕರೆತರಲಾಗುತ್ತಿದೆ. ಈಗಾಗಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ವಿದೇಶಾಂಗ ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಶಾಸಕರ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಿದ್ದು, ಹೊಸದಿಲ್ಲಿಯ ರಾಯಭಾರಿ ಕಚೇರಿ ಮೂಲಕ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸಹಕಾರ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿದರು.

ಧರ್ಮಗುರುಗಳಾದ ಚಾಲ್ಸ ಮಿನೇಜಸ್‌, ಸಮುದಾಯದ ಪ್ರಮುಖರಾದ ರಾಜೇಶ್‌, ಆಲ್ವಿನ್‌ ಡಿ’ಸೋಜಾ, ಡೆನಿಸ್‌ ಮಸ್ಕರೇನಸ್‌, ಶೆರ್ಲಿನ್‌, ನಗರ ಬಿಜೆಪಿ ಕಾರ್ಯದರ್ಶಿ ದಿನೇಶ್‌ ಅಮೀನ್‌, ಮಾಜಿ ನಗರ ಸಭಾ ಸದಸ್ಯರಾದ ಪ್ರಶಾಂತ್‌ ಭಟ್‌, ಅರುಣಾ ಪೂಜಾರಿ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next