Advertisement

ಕಿತ್ತಳೆ ಜೆರ್ಸಿಯಿಂದ ಸೋಲು:ಮೆಹಬೂಬ ವಿವಾದಾತ್ಮಕ ಹೇಳಿಕೆ

01:52 AM Jul 02, 2019 | Team Udayavani |

ಹೊಸದಿಲ್ಲಿ: ಕೊಹ್ಲಿ ಪಡೆ ಇಂಗ್ಲೆಂಡ್‌ ವಿರುದ್ಧ ಆಡುವಾಗ ಧರಿಸಿದ್ದ ಕಿತ್ತಳೆ ಜೆರ್ಸಿ ಕುರಿತಾದ ವಿವಾದ ಮುಂದುವರಿದಿದೆ.

Advertisement

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಕಿತ್ತಳೆ ಜೆರ್ಸಿಯಿಂದಾಗಿ ಸೋಲಾಯಿತು ಎಂದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ತಾನು ತಮಾಷೆಗಾಗಿ ಈ ಮಾತು ಹೇಳಿದ್ದೇನೆ ಎಂದು ಮೆಹಬೂಬ ವಿವಾದವನ್ನು ತೇಲಿಸಲು ಪ್ರಯತ್ನಿಸಿದರೂ ಅವರ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿವೆ. ‘ನನ್ನದು ಮೂಢನಂಬಿಕೆ ಎಂದರೂ ಪರವಾಗಿಲ್ಲ, ಕಿತ್ತಳೆ ಜೆರ್ಸಿಯಿಂದಾಗಿಯೇ ವಿಶ್ವಕಪ್‌ನಲ್ಲಿ ಭಾರತದ ಗೆಲುವಿನ ಸರಪಣಿ ಕಡಿಯಿತು’ ಎಂದು ಮುಫ್ತಿ ಟ್ವೀಟ್ ಮಾಡಿದ್ದರು. ‘ಮೆಹಬೂಬ ಮುಫ್ತಿಯ ಹೃದಯ ಪಾಕಿಸ್ಥಾನಕ್ಕಾಗಿ ಮಿಡಿ ಯುತ್ತಿದೆ. ಹೀಗಾಗಿ ಅವರು ಇಂಥ ಹೇಳಿಕೆ ನೀಡಿದ್ದಾರೆ’ ಎಂದು ಬಿಜೆಪಿ ನಾಯಕ ರವೀಂದರ್‌ ರೈನಾ ಎದಿರೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next