Advertisement

Thekkatte ಬೈಕ್‌ಗೆ ಅಡ್ಡ ಬಂದ ಜಿಂಕೆ; ಸವಾರ ಗಂಭೀರ

12:15 AM Jan 10, 2024 | Team Udayavani |

ತೆಕ್ಕಟ್ಟೆ: ಇಲ್ಲಿನ ನೂಜಿ ರಬ್ಬರ್‌ ಪ್ಲಾಂಟೇಶನ್‌ ಸಮೀಪ ಚಲಿಸುತ್ತಿದ್ದ ಬೈಕ್‌ಗೆ ಜಿಂಕೆಯೊಂದು ಅಡ್ಡ ಬಂದ ಪರಿಣಾಮ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಜ. 9ರಂದು ರಾತ್ರಿ 7.15ರ ಸುಮಾರಿಗೆ ಸಂಭವಿಸಿದೆ.

Advertisement

ಇಲ್ಲಿನ ಬೇಳೂರು ಕರಾಣಿ ನಿವಾಸಿ ಜಯಕರ ಕುಲಾಲ ಎನ್ನುವವರು ಎಂದಿನಂತೆ ಕೊರ್ಗಿಯಿಂದ ಗಾರೆ ಕೆಲಸ ಮುಗಿಸಿ ಬೇಳೂರು ಕಡೆಗೆ ಬೈಕ್‌ನಲ್ಲಿ ಸಾಗುತ್ತಿದ್ದ ಸಂದರ್ಭ ನೂಜಿ ರಬ್ಬರ್‌ ಪ್ಲಾಂಟೇಶನ್‌ ಸಮೀಪ ಜಿಂಕೆಯೊಂದು ಏಕಾಏಕಿ ಬೈಕ್‌ಗೆ ಅಡ್ಡಲಾಗಿ ಓಡಿ ಬಂದಿದ್ದು, ಪರಿಣಾಮ ಬೈಕ್‌ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿತ್ತು.

ಬೈಕ್‌ ಸವಾರ ಜಯಕರ ಕುಲಾಲ ಅವರ ಮುಖ ಹಾಗೂ ಕೈ ಕಾಲುಗಳಿಗೆ ಗಂಭೀರವಾಗಿ ಗಾಯಗಳಾಗಿವೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರಾದ ಮಂಜುನಾಥ ಆಚಾರ್ಯ ಹಾಗೂ ಮಂಜುನಾಥ ಶೆಟ್ಟಿಗಾರ್‌ ಅವರು ತತ್‌ಕ್ಷಣವೇ ಆಟೋರಿಕ್ಷಾ ಮೂಲಕ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next