Advertisement

ಜಿಲ್ಲೆಯಲ್ಲಿ ಜಿಂಕೆವನ ಸ್ಥಾಪಿಸಿ

08:05 PM Jul 12, 2021 | Team Udayavani |

ಕೊಪ್ಪಳ: ಜಿಲ್ಲೆಯಲ್ಲಿ ಜಿಂಕೆ ಹಾವಳಿ ಹೆಚ್ಚಾಗುತ್ತಿದ್ದು, ಸರ್ಕಾರಕ್ಕೆ ಜಿಂಕೆ ವನ ಸ್ಥಾಪನೆ ಮಾಡಿ ಎಂದು ಹಲವು ಬಾರಿ ಒತ್ತಾಯ ಮಾಡಲಾಗಿದೆ. ಆದರೂ ಸರ್ಕಾರ ಕಾಳಜಿ ವಹಿಸಿಲ್ಲ. ಇನ್ನಾದರೂ ರೈತರ ಸಮಸ್ಯೆ ಅರಿತು ಜಿಂಕೆವನ ಸ್ಥಾಪಿಸಿ ರೈತರ ಹಿತ ಕಾಪಾಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈತರು ತಮ್ಮ ಹೊಲಗಳಲ್ಲಿ ಬೆಳೆಗಳನ್ನು ಉಳಿಸಿಕೊಳ್ಳಲು, ಜಿಂಕೆ ಹಾವಳಿ ತಪ್ಪಿಸಲು ಪ್ಲಾಸ್ಟಿಕ್‌ ಹಾಳೆಯನ್ನು ಹೊಲದ ಸುತ್ತಲು ಕಟ್ಟುತ್ತಿದ್ದಾರೆ. ಇದರಿಂದ ಜಿಂಕೆಗಳು ಹಾಳೆಯ ಶಬ್ಧಕ್ಕೆ ಹೆದರಿ ಬರುವುದಿಲ್ಲ. ಕೆಲವರು ಹೊಲದಲ್ಲಿ ಗೊಂಬೆಗಳನ್ನು ಮಾಡಿಸಿ ನಿಲ್ಲಿಸುತ್ತಿದ್ದಾರೆ. ರೈತರು ವಿವಿಧ ಯತ್ನ ನಡೆಸಿ ಬೆಳೆ ರಕ್ಷಣೆಗೆ ಮುಂದಾದರೂ ಜಿಂಕೆಗಳು ಹೊಲದಲ್ಲಿ ಹಗಲು-ರಾತ್ರಿ ಸುತ್ತಾಡಿ ಬೆಳೆ ಹಾನಿ ಮಾಡುತ್ತಿವೆ. ಇದರಿಂದ ಬೆಳೆ ಕೈಗೆ ಬರುವ ಹಂತದಲ್ಲಿಯೇ ಎಲ್ಲವೂ ಹಾನಿಗೀಡಾಗುತ್ತಿದೆ. ಇಲ್ಲಿನ ಬೆಳೆ ಹಾನಿಯ ಕುರಿತು ಜನಪ್ರತಿನಿಧಿಗಳಿಗೆ ಗೊತ್ತಿದ್ದರೂ ಮೌನವಾಗಿ ಕುಳಿತಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಜಮೀನಿಗೆ ಬಂದು ನೋಡುತ್ತಿಲ್ಲ. ರೈತರ ಸಂಕಷ್ಟ ಆಲಿಸುತ್ತಿಲ್ಲ. ಸರ್ಕಾರ ಇಂತ ಸಮಸ್ಯೆ ಅರಿತು ಕೂಡಲೇ ಜಿಂಕೆವನ ನಿರ್ಮಾಣ ಮಾಡಿ ಜಿಂಕೆ ಕಾಟವನ್ನು ತಪ್ಪಿಸಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next