Advertisement

ಜಿಂಕೆ ಅಡ್ಡ ಬಂದು ಬೈಕ್ ಪಲ್ಟಿ : ಜಿಂಕೆ ಮೃತ್ಯು : ಸವಾರ ಗಂಭೀರ ಗಾಯ..!

09:27 AM Nov 21, 2021 | Team Udayavani |

ಶಿರ್ವ : ಬೈಕ್‌ಗೆ ಅಡ್ಡ ಬಂದ ಜಿಂಕೆಯೊಂದು ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಶಂಕರಪುರ ಎಂಬಲ್ಲಿ ನಡೆದಿದೆ.

Advertisement

ಬಂಟಕಲ್ ನಿವಾಸಿ ಹರ್ಷಿತ್(20) ಎಂಬಾತ ಗಾಯಗೊಂಡ ಬೈಕ್ ಸವಾರ ಎನ್ನಲಾಗಿದೆ

ತಾಲೂಕಿನ ಶಂಕರಪುರದ ಸುಭಾಸ್‌ನಗರ ಎಂಬಲ್ಲಿಯ ರಾಜ್ಯ ಹೆದ್ದಾರಿಯಲ್ಲಿ ಬೈಕ್‌ಗೆ  ಜಿಂಕೆಯೊಂದು ಅಡ್ಡ ಬಂದ ಪರಿಣಾಮ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್  ಸವಾರ ಹರ್ಷಿತ್  ಗಂಭೀರ ಗಾಯಗೊಂಡು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಸಹಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next