Advertisement

ಕೃಷಿ ಮಸೂದೆ ವಿರೋಧಿಸಿ ಸೆ.25ರಿಂದ ಕರ್ನಾಟಕ ಬಂದ್? ನಾಳೆ ಬೆಳಿಗ್ಗೆ ಅಂತಿಮ ನಿರ್ಧಾರ

04:23 PM Sep 22, 2020 | keerthan |

ಬೆಂಗಳೂರು: ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಸೆ.25ರಂದು ನಡೆಯಲಿಚ್ಚಿಸಿರುವ ಕರ್ನಾಟಕ ಬಂದ್ ನ ಬಗ್ಗೆ ಅಂತಿಮ ನಿರ್ಧಾರ ಬುಧವಾರ ಬೆಳಿಗ್ಗೆ ಕೈಗೊಳ್ಳಲಿದ್ದೇವೆ ಎಂದು ರೈತ ಸಂಘ ತಿಳಿಸಿದೆ.

Advertisement

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೈತ ಸಂಘದ ಪದಾಧಿಕಾರಿಗಳು ದೇಶಾದ್ಯಂತ ಕೇಂದ್ರ ಸರಕಾರದ ನಡೆಯ ಬಗ್ಗೆ ವಿರೋಧ ವ್ಯಕ್ತವಾಗಿದೆ. ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ಸೆ.25ರಂದು ಬಂದ್ ಆಚರಿಸಲಿದ್ದಾರೆ. ನಾವು ಕೂಡಾ ಇಂದು ಸಂಜೆ ರಾಷ್ಟ್ರದ ವಿವಿಧ ಸಂಘಟನೆಗಳ ಜೊತೆ ಚರ್ಚೆ ನಡೆಸುತ್ತೇವೆ. ಬಂದ್ ಬಗ್ಗೆ ನಾಳೆ ಬೆಳಿಗ್ಗೆ ಅಂತಿಮ ನಿರ್ಧಾರ ಪ್ರಕಟಿಸುತ್ತೇವೆ ಎಂದರು.

ಇದನ್ನೂ ಓದಿ: ಕೃಷಿ ಕಾಯ್ದೆಯಿಂದ ರೈತರಿಗೆ ಸ್ವಾತಂತ್ರ್ಯ ಸಿಕ್ಕಿದ ಹಾಗಾಗಿದೆ: ಸಚಿವ ಬಿ.ಸಿ. ಪಾಟೀಲ್

ಕರವೇ ಸಂಘಟನೆಯ ಎರಡೂ ಬಣಗಳು ಬಂದ್ ಗೆ ಬೆಂಬಲ ಸೂಚಿಸಿದೆ. ಹೋಟೆಲ್ ಸಂಘಟನೆಗಳು ನೈತಿಕ ಬೆಂಬಲ ಸೂಚಿಸಿದ್ದು, ಬಂದ್ ಮಾಡವುದಿಲ್ಲ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next