Advertisement

ದೇಶದ್ರೋಹ ಪ್ರಕರಣ ವಕಾಲತ್ತು ವಹಿಸದಂತೆ ನಿರ್ಧಾರ

10:51 PM Jan 14, 2020 | Team Udayavani |

ಮೈಸೂರು: ಜೆಎನ್‌ಯುನಲ್ಲಿ ನಡೆದ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಕರಣ ಖಂಡಿಸಿ ಮೈಸೂರು ವಿಶ್ವವಿದ್ಯಾಲಯ ಮಾನಸ ಗಂಗೋತ್ರಿ ಆವರಣದಲ್ಲಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ್‌ ಫ‌ಲಕ ಹಿಡಿದಿದ್ದ ಯುವತಿ ಪರ ಯಾರೂ ವಕಾಲತ್ತು ವಹಿಸಬಾರದು ಎಂದು ಮೈಸೂರು ಜಿಲ್ಲಾ ವಕೀಲರ ಸಂಘ ನಿರ್ಣಯ ಕೈಗೊಂಡಿದೆ. ಸೋಮವಾರ ಮೈಸೂರು ವಕೀಲರ ಸಂಘದ ಸದಸ್ಯರು ಫ್ರೀ ಕಾಶ್ಮೀರ್‌ ಫ‌ಲಕ ಹಿಡಿದಿದ್ದ ಯುವತಿ ಪರ ಯಾರೂ ವಕಾಲತ್ತು ವಹಿಸಬಾರದೆಂದು ಸಂಘದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದರು.

Advertisement

ಈ ಸಂಬಂಧ ರಾಷ್ಟ್ರದ್ರೋಹ ಪ್ರಕರಣದ ಪರ ವಕಾಲತ್ತು ವಹಿಸಬಾರದು ಎಂದು ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಬಳಿಕ ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದೆ. ಆರೋಪಿ ನಳಿನಿ ಪರ ನಮ್ಮ ವಕೀಲರ ಸಂಘದ ಯುವ ವಕೀಲರಾದ ಕಿರಣ್‌ ಅವರು ಮಧ್ಯಂತರ ಜಾಮೀನಿಗೆ ವಕಾಲತ್ತು ವಹಿಸಿದ್ದರು. ತದ ನಂತರ ಪ್ರಕರಣದ ಗಂಭೀರತೆಯನ್ನು ಅರಿತು ದೇಶದ್ರೋಹ ಕೃತ್ಯವೆಸಗಿರುವವರ ಪರ ವಕಾಲತ್ತು ವಹಿಸುವುದಿಲ್ಲ ಎಂದು ಹಿಂದೆ ಸರಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next