Advertisement

ಸಾಲಬಾಧೆ: ಇಬ್ಬರ ಆತ್ಮಹತ್ಯೆ

08:00 AM Aug 18, 2018 | Team Udayavani |

ಭಾಲ್ಕಿ/ಆಳಂದ: ಪ್ರತ್ಯೇಕ ಪ್ರಕರಣದಲ್ಲಿ ಸಾಲ ಬಾಧೆ ತಾಳದೆ ರೈತ ಮಹಿಳೆ ಸೇರಿದಂತೆ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

Advertisement

ಭಾಲ್ಕಿಯ ತರನಳ್ಳಿ ಗ್ರಾಮದ ಓಂಕಾರ ಚನ್ನಮಲ್ಲಯ್ಯ ಸ್ವಾಮಿಮs… (48) ತಮ್ಮ 2 ಎಕರೆ ಹೊಲದಲ್ಲಿ ಬೆಳೆದ ಸೋಯಾ, ಹೆಸರು ಬೆಳೆ ನಾಶವಾಗಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಾಂತಿಯ ಪಿಕೆಪಿಎಸ್‌ ಬ್ಯಾಂಕ್‌ನಲ್ಲಿ 50 ಸಾವಿರ, ಕೆಜಿಬಿ ಸಿದ್ದೇಶ್ವರದಲ್ಲಿ 50 ಸಾವಿರ ಮತ್ತು ಕೆನರಾ ಬ್ಯಾಂಕ್‌ನಲ್ಲಿ 50 ಸಾವಿರ ಸಾಲ ಮಾಡಿದ್ದರು ಎನ್ನಲಾಗಿದೆ.

ಪತಿಯ ಸಾವಿನ ಬಳಿಕ ಕುಟುಂಬ ನಿರ್ವಹಣೆ ಸಂಕಷ್ಟದ ನಡುವೆ ಆದ ಸಾಲಬಾಧೆಗೆ ನೊಂದ ಆಳಂದ ತಾಲೂಕಿನ ಖಜೂರಿ ವಲಯದ ತಢೋಳಾ ಗ್ರಾಮದ ರೈತ ಮಹಿಳೆ ಮಂಗಲಾ (ರಾಜೇಶ್ರೀ)ನಾಗರಾವ್‌ (35) ಬಾವಿಗೆ ಹಾರಿ ಆತ್ಮಹತ್ಯೆಗೆ
ಶರಣಾಗಿದ್ದಾರೆ. ಮೃತರಿಗೆ ಒಂದು ಹೆಕ್ಟೇರ್‌ ಜಮೀನು ಇದ್ದು, ಗ್ರಾಮದಲ್ಲಿನ ಖಾಸಗಿ ವ್ಯಕ್ತಿಗಳ ಬಳಿ ನಾಲ್ಕು ಲಕ್ಷ ರೂ. ಸಾಲ
ಮಾಡಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next