Advertisement

Sullia ಪ್ರಕರಣ ಹಿಂಪಡೆಯುವಂತೆ ಮಹಿಳೆಗೆ ಜೀವಬೆದರಿಕೆ; ದೂರು

01:28 AM Jan 07, 2024 | Team Udayavani |
ಸುಳ್ಯ: ಠಾಣೆಗೆ ನೀಡಿದ ಪ್ರಕರಣವನ್ನು ಹಿಂಪಡೆಯುವಂತೆ ತಡೆದು ಜೀವಬೆದರಿಕೆ ಒಡ್ಡಿ ಆ್ಯಸಿಡ್‌ ಎರಚುವುದಾಗಿ ಬೆದರಿಸಿದ ಬಗ್ಗೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಚಿತ್ರಪ್ರಭಾ ರೈ (40) ಅವರು ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ. 5ರ ಸಂಜೆ, ಕೊಳ್ತಿಗೆ ಗ್ರಾಮದಲ್ಲಿ ಮನೆ ಕಡೆಗೆ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿಗಳಾದ ಪ್ರದೀಶ್‌ ಶೆಟ್ಟಿ, ಭಾಸ್ಕರ ರೈ ಧರ್ಮಸ್ಥಳ, ರವೀಂದ್ರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸರಳಾ ರೈ, ಜಯಶ್ರೀ ಶೆಟ್ಟಿ, ಕನ್ಯಾಕುಮಾರಿ ರೈ, ಕಾವ್ಯಾ ರೈ, ಅಮಿತಾ ರೈ, ವಾರಿಜಾ ರೈ, ಯತೀಂದ್ರನಾಥ ಶೆಟ್ಟಿ ಹಾಗೂ ಇತರ ಅಪರಿಚಿತ ಇಬ್ಬರು ಮಹಿಳೆಯರು ಹಾಗೂ 6 ಪುರುಷರು ಗುಂಪು ಸೇರಿ, ತಡೆದು ನಿಲ್ಲಿಸಿದ್ದು, ಈ ಆರೋಪಿತರು ರಾಕೇಶ್‌ ಶೆಟ್ಟಿ ಮತ್ತು ಪ್ರಶಾಂತ ಅವರ ವಿರುದ್ಧ ಪೊಲೀಸ್‌ ಠಾಣೆಗೆ ನೀಡಿದ ಪ್ರಕರಣವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಜೀವ ಬೆದರಿಕೆ ಒಡ್ಡಿದ್ದು, ಒಂದು ವೇಳೆ ಪ್ರಕರಣ ಹಿಂಪಡೆಯದಿದ್ದರೆ ಆ್ಯಸಿಡ್‌ ಹಾಕುವುದಾಗಿ ಬೆದರಿಕೆ ಒಡ್ಡಿದ್ದಾಗಿ ಚಿತ್ರಪ್ರಭಾ ಅವರು ದೂರಿನಲ್ಲಿ ತಿಳಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next