Advertisement

ಹೇಮಗುಡ್ಡ ದಸರಾ ಅಂಬಾರಿ ಹೊರುತ್ತಿದ್ದ ಆನೆ ಸಾವು

08:27 PM Nov 15, 2021 | Team Udayavani |

ಗಂಗಾವತಿ :ಇತಿಹಾಸ ಪ್ರಸಿದ್ಧ ಹೇಮಗುಡ್ಡ ನವರಾತ್ರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊರುತ್ತಿದ್ದ ಎಪ್ಪತ್ತು ವರ್ಷದ ಲಕ್ಷ್ಮೀ ಎಂಬ ಆನೆಯು ಸೋಮವಾರ ಬೆಳಗಾವಿ ಜಿಲ್ಲೆಯ ಚಿಪ್ಪಲಕಟ್ಟಿ ಶ್ರೀ ಲಕ್ಷ್ಮೀ ದೇವಸ್ಥಾನದಲ್ಲಿ ವಯೋ ಸಹಜವಾಗಿ ಮೃತಪಟ್ಟಿದೆ.

Advertisement

ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಹೇಮಗುಡ್ಡದಲ್ಲಿ ಮಾಜಿ ಸಂಸದ ಎಚ್ ಜಿ ರಾಮುಲು ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್ ಆರ್ ಶ್ರೀನಾಥ್ ಅವರ ಕುಟುಂಬದವರು ಕಳೆದ 30 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಶ್ರೀ ದುರ್ಗಾಪರಮೇಶ್ವರಿ ಮೂರ್ತಿಯ ಅಂಬಾರಿಯನ್ನು ಲಕ್ಷ್ಮಿ ಆನೆ ಹೊರುತ್ತಿತ್ತು. ಕಳೆದ ನವರಾತ್ರಿ ಸಂದರ್ಭದಲ್ಲಿ ಸಹ ಲಕ್ಷ್ಮಿ ಆನೆ ಅಂಬಾರಿಯನ್ನು ಹೊತ್ತು ಸಾಗಿತ್ತು ಸೋಮವಾರ ವಯೋಸಹಜ ಅನಾರೋಗ್ಯದಿಂದಾಗಿ ಆನೆಯು ಮೃತಪಟ್ಟಿದೆ.

ಇದನ್ನೂ ಓದಿ:ಇದು ಪಾರ್ಟಿ ಪೋಸ್ಟರ್‌ ಅಲ್ಲ.. ಮದುವೆ ಆಮಂತ್ರಣ!

ಸಂತಾಪ :ಹೇಮಗುಡ್ಡ ದಸರಾ ಅಂಬಾರಿ ಹೊರುತ್ತಿದ್ದ ಬೆಳಗಾವಿ ಜಿಲ್ಲೆಯ ಚಿಪ್ಪಲಕಟ್ಟಿ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಆನೆಯು ಮೃತಪಟ್ಟಿದ್ದಕ್ಕೆ ಮಾಜಿ ಸಂಸದ ಐ ಜಿ ರಾಮುಲು, ಮಾಜಿ ಎಂಎಲ್ಸಿ ಎಚ್ ಆರ್ ಶ್ರೀನಾಥ್ ಸೇರಿದಂತೆ ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಸ್ಥಾನದ ಕಮಿಟಿಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next