Advertisement

ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ ರೈತ ಮಹಿಳೆ ಸಾವು

07:39 PM Oct 13, 2021 | Team Udayavani |

ಭಾಲ್ಕಿ: ತಾಲೂಕಿನ ವರವಟ್ಟಿ(ಬಿ) ಗ್ರಾಮದಲ್ಲಿ ಬುಧವಾರ ಸೋಯಾ ರಾಶಿ ಮಾಡುವ ಸಂದರ್ಭದಲ್ಲಿ, ರಾಶಿ ಯಂತ್ರಕ್ಕೆ ಸಿಲುಕಿ ರೈತ ಮಹಿಳೆ ಸಾವನಪ್ಪಿದ ಘಟನೆ ನಡೆದಿದೆ.

Advertisement

ಸಂಗೀತಾ ಶ್ರೀಹರಿ ಬಿರಾದಾರ (35) ಮೃತ ರೈತ ಮಹಿಳೆ.

ರೈತ ಮಹಿಳೆಯ ಎರಡು ಎಕರೆ ಹೊಲದಲ್ಲಿ ಬೆಳೆದ ಸೋಯಾ ರಾಶಿಯನ್ನು ಯಂತ್ರಕ್ಕೆ ಹಾಕುವ ಸಂದರ್ಭದಲ್ಲಿ ರೈತ ಮಹಿಳೆಯ ಸೀರೆ ಸೆರಗು ಯಂತ್ರದಲ್ಲಿ ಸಿಲುಕಿ ಈ ಘಟನೆ ಸಂಭವಿಸಿದೆ ಎನ್ನುತ್ತಾರೆ ಪ್ರತ್ಯಕ್ಷ ದರ್ಶಿಗಳು.

ರೈತ ಮಹಿಳೆಯ ಗಂಡ ಶ್ರಿಹರಿ ಬಿರಾದಾರ ಹೈದರಾಬಾದ್ ಟ್ರಾನ್ಸ್ ಪೋರ್ಟ್ ನಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ರೈತ ಮಹಿಳೆಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ.

ಬಡ ರೈತ ಮಹಿಳೆಯ ಕುಟುಂಬಕ್ಕೆ ಸರ್ಕಾರದಿಂದ ಸಹಾಯಧನ ಒದಗಿಸಬೇಕು ಎಂದು ಗ್ರಾ.ಪಂ.ಅಧ್ಯಕ್ಷ ಶಂಕರರಾವ ರಾಮರಾವ ಬಿರಾದಾರ ಮನವಿ ಮಾಡಿದ್ದಾರೆ.

Advertisement

ಇದನ್ನೂ ಓದಿ:ಮಾಜಿ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ಏಮ್ಸ್ ಗೆ ದಾಖಲು

ಘಟನಾ ಸ್ಥಳಕ್ಕೆ ಉಪ ತಹಸಿಲ್ದಾರರು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next