Advertisement

Siddapura ಗೋರಿಜೆಡ್ಡು ಘಟನೆ ಕೊಲೆಯಲ್ಲ: ಬೈಕ್‌ ಅಪಘಾತದಲ್ಲಿ ಸಾವು

11:47 PM Dec 02, 2023 | Team Udayavani |

ಸಿದ್ದಾಪುರ: ಆಜ್ರಿ ಗ್ರಾಮದ ಗೋರಿಜೆಡ್ಡು ಎಂಬಲ್ಲಿ ನ.30ರ ರಾತ್ರಿ ತನ್ನ ಸಹೋದರ ಮಂಜುನಾಥ (36) ಅವರನ್ನು ಬೈಕ್‌ ಅಪಘಾತದ ರೀತಿಯಲ್ಲಿ ಕೊಲೆ ಮಾಡಲಾಗಿದೆ ಎಂದು ಸತೀಶ್‌ (33) ಅವರು ಪೊಲೀಸರಿಗೆ ದೂರು ನೀಡಿದ್ದರು.

Advertisement

ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಶಂಕರನಾರಾಯಣ ಪೊಲೀಸರು ಇದೊಂದು ಬೈಕ್‌ ಮತ್ತು ಸ್ಕೂಟರ್‌ ನಡುವೆ ನಡೆದ ಮುಖಾಮುಖೀ ಅಪಘಾತ ವಾಗಿದ್ದು ಕೊಲೆಯಲ್ಲ ಎಂದು ತಿಳಿದು ಬಂದಿದೆ.

ಈ ಅಪಘಾತದಲ್ಲಿ ಬೈಕ್‌ ಸವಾರ ಮಂಜುನಾಥ ಮೃತಪಟ್ಟಿದ್ದರು. ಸ್ಕೂಟರ್‌ ಸವಾರರಾದ ಮನೋಜ್‌ ಮತ್ತು ಶಶಿಕಾಂತ್‌ ಗಂಭೀರವಾಗಿ ಗಾಯಗೊಂಡು, ಕೋಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next