Advertisement

Padubidri: ವೆಲ್ಡಿಂಗ್‌ ಕೆಲಸದ ವೇಳೆ ಕೆಳಕ್ಕೆ ಬಿದ್ದು ಸಾವು: ಇಬ್ಬರ ವಿರುದ್ಧ ಪ್ರಕರಣ

07:42 PM Aug 14, 2024 | Team Udayavani |

ಪಡುಬಿದ್ರಿ: ತೆಂಕ ಎರ್ಮಾಳಿನಲ್ಲಿ ಆ. 12ರಂದು ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದಾಗ 12ಅಡಿ ಎತ್ತರದಿಂದ ಕೆಳಕ್ಕೆ ಬಿದ್ದು ತಲೆಗೆ ತೀವ್ರತರ ಗಾಯಗೊಂಡಿದ್ದ ಉತ್ತರಪ್ರದೇಶದ ಧೀರಜ್‌ ಚೌಧುರಿ(19) ಎಂಬ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲದ ಆಸ್ಪತ್ರೆಯಲ್ಲಿ ಮಂಗಳವಾರ (ಆ. 13) ಮುಂಜಾವದ ವೇಳೆ ಸಾವಿಗೀಡಾಗಿದ್ದಾರೆ.

Advertisement

ಆತನ ಅಣ್ಣ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ನೀಡಿದ ದೂರಿನನ್ವಯ ಕೆಲಸದ ಉಸ್ತುವಾರಿ ನಿರ್ವಹಿಸಿದ್ದ ರಾಮಚಂದ್ರ ಮಾಬಿನ್‌ ಹಾಗೂ ಮಹಮ್ಮದ್‌ ರಫೀಕ್‌ ಎಂಬವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.

ಕೆಲಸದ ವೇಳೆ ಉಸ್ತುವಾರಿ ಮಂದಿ ಮಾಡಿರುವ ನಿರ್ಲಕ್ಷ್ಯತೆ ಹಾಗೂ ಸುರಕ್ಷತಾ ವಿಧಾನಗಳನ್ನು ಅನುಸರಿಸಿಲ್ಲದ ಕಾರಣ ಈ ಸಾವು ಸಂಭವಿಸಿರುವುದಾಗಿ ಧೂರಲ್ಲಿ ತಿಳಿಸಲಾಗಿದೆ. ಪಡುಬಿದ್ರಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next