Advertisement

ಮೊವಾಡಿ ಕೊರಗರ ಕಾಲನಿಗೆ ಡಿಸಿ ಭೇಟಿ

11:29 AM May 09, 2017 | Team Udayavani |

ಕುಂದಾಪುರ: ಹೊಸಾಡು ಗ್ರಾಮದ ಮೊವಾಡಿಯ ಕೊರಗರ ಕಾಲನಿಯಲ್ಲಿ ಈಚೆಗೆ ಕೆಲವರು ದಾಳಿ ನಡೆಸಿ ದೌರ್ಜನ್ಯ ನಡೆಸಿದರು ಎನ್ನಲಾದ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಸೋಮವಾರ ಅಧಿಕಾರಿಗಳ ಜತೆ ಅಲ್ಲಿಗೆ ಭೇಟಿ ನೀಡಿದರು.

Advertisement

ಕುಟುಂಬದ ಸದಸ್ಯರಿಂದ ಅವರು ಘಟನೆ ವಿವರ ಪಡೆದು ಯೋಗಕ್ಷೇಮ ಮತ್ತು ಸಮಸ್ಯೆ ಕುರಿತು ವಿಚಾರಿಸಿದರು. ಅವರೊಂದಿಗೆ ಮಾತನಾಡಿದ ಕುಟುಂಬದ ಮಹಿಳೆ, ಗ್ರಾ.ಪಂ. ಸದಸ್ಯೆ ಶಕುಂತಳಾ ಘಟನೆ ಕಾರಣ ಕುಟುಂಬದ ಮೂವರ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದುಪಡಿಸಬೇಕೆಂದು ಮನವಿ ಮಾಡಿದರಲ್ಲದೆ, ತಮ್ಮ ಮನೆ ನಿವೇಶನದ ಸುತ್ತ ರಕ್ಷಣೆಗಾಗಿ ಆವರಣ, ದಾರಿ ದೀಪ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡಿದರು. ಅದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಸಂಬಂಧಿಸಿದ ಇಲಾಖೆಗಳ ಮೂಲಕ ಸೌಲಭ್ಯ ಒದಗಿಸುವ ಭರವಸೆ ಯಿತ್ತರು.

ಜಿಲ್ಲಾಧಿಕಾರಿ ಜತೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಮೇಶ್‌, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಹರೀಶ ಗಾಂವ್‌ಕರ್‌, ಎಸ್‌ಐ ಬಿ. ಸುಬ್ಬಣ್ಣ, ಅಭಿವೃದ್ಧಿ ಅಧಿಕಾರಿ ಪಾರ್ವತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next