Advertisement

ಮಾರ್ಕೋನಹಳ್ಳಿ ಜಲಾಶಯಕ್ಕೆ ಯಾವುದೇ ಅಪಾಯವಿಲ್ಲ : ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್

05:41 PM Aug 08, 2022 | Team Udayavani |

ಕುಣಿಗಲ್ : ಮಾರ್ಕೋನಹಳ್ಳಿ ಜಲಾಶಯದ ನೀರು ಹೊರ ಹಾಕುವ ತಾತ್ಕಾಲಿಕ ಗೇಟ್ ನ ಸರಪಳಿ  ಮುರಿದಿರುವುದರಿಂದ ಅಣೆಕಟ್ಟೆಗೆ ಯಾವುದೇ ಅಪಾಯವಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ತಿಳಿಸಿದ್ದಾರೆ,.

Advertisement

ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದ ತಾತ್ಕಲಿಕ ಗೇಟ್ ಸರಪಳಿ ಮುರಿದಿರುವುದರಿಂದ ಜಲಾಶಯ ಕ್ಕೆ ಅಪಾಯವಿದೆ ಎಂದು ಸಾಮಾಜಿಕ ಜಾಲಾತಾಣ ಹಾಗೂ ಕೆಲ ಮಾಧ್ಯಗಳಲ್ಲಿ ವರದಿ ಹಬ್ಬಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಜಲಾಶಯದ ಮುಖ್ಯ ಗೇಟ್ ಗಳಿಗೆ ಯಾವುದೇ ಹಾನಿಯಾಗಿಲ್ಲ. ಉತ್ತಮವಾಗಿ ಕೆಲಸ ಮಾಡುತ್ತಿದೆ ಆದರೆ ತಾತ್ಕಾಲಿಕ ಗೇಟ್ ಅಪರೇಟ್ ಮಾಡುವ ವೇಳೆ ಸರಪಳಿ ತುಂಡಾಗಿದೆ ಇದರಿಂದ ಜಲಾಶಯದ ಅಣೆಕಟ್ಟೆಗೆ ಯಾವುದೇ ತೊಂದರೆ ಯಾಗುವುದಿಲ್ಲ, ಎಂದು ಸ್ಪಷ್ಟಪಡಿಸಿದ ಅವರು ತುಂಡಾಗಿರುವ ಸರಪಳಿಯನ್ನು ದುರಸ್ಥಿ ಅಥವಾ ಹೊಸದಾಗಿ ಅಳವಡಿಸುವಂತೆ ಹೇಮಾವತಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಅಲ್ಲದೆ ಎಲ್ಲಾ ಗೇಟ್ ಗಳನ್ನು ಬಂದ್ ಮಾಡಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next