Advertisement

ಹದ್ದುಬಸ್ತ್ ಹೋಳಿಗೆ ಡಿಸಿ ಸೂಚನೆ

06:38 PM Mar 25, 2021 | Team Udayavani |

ಧಾರವಾಡ : ಕೋವಿಡ್‌-19 ಎರಡನೇ ಅಲೆಯ ಭೀತಿಯ ಕಾರಣ ಮುಂಬರುವ ಹೋಳಿ ಹಬ್ಬವನ್ನು ತಮ್ಮ ಕುಟುಂಬಗಳಿಗೆ ಸೀಮಿತಗೊಳಿಸಿ ಸಂಕ್ಷಿಪ್ತವಾಗಿ ಆಚರಿಸುವಂತೆ ಡಿಸಿ ನಿತೇಶ್‌ ಪಾಟೀಲ ಮನವಿ ಮಾಡಿದರು.

Advertisement

ನಗರದ ಮಹಾನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಜರುಗಿದ ಅವಳಿ ನಗರದಲ್ಲಿರುವ ಹೋಳಿ, ಹಲಗಿ-ಕಾಮಣ್ಣನ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಪೊಲೀಸ್‌ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್‌ ಎರಡನೇ ಅಲೆ ಆರಂಭವಾಗಿದ್ದು, ಪ್ರತಿಯೊಬ್ಬರೂ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಿದೆ. ಈಗಾಗಲೇ ಆರೋಗ್ಯ ಇಲಾಖೆ ಸಿಬ್ಬಂದಿ ದಿನದ 24 ಗಂಟೆ ಕರ್ತವ್ಯ ನಿರ್ವಹಿಸಿ ಮಾಹಿತಿ, ಮುನ್ನೆಚ್ಚರಿಕೆ ಮತ್ತು ಆರೋಗ್ಯ ಸುರಕ್ಷತಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡುತ್ತಿದ್ದಾರೆ.

ಹೀಗಾಗಿ ಹೋಳಿ ಹಬ್ಬದ ಆಚರಣೆ ಸಂದರ್ಭದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಹಾನಿಕಾರಕ ಬಣ್ಣಗಳನ್ನು ಬಳಸದೇ ನೈಸರ್ಗಿಕ ಬಣ್ಣಗಳನ್ನು ಬಳಸಿ ಕುಟುಂಬ ಸದಸ್ಯರೊಂದಿಗೆ ಸಂಕ್ಷಿಪ್ತವಾಗಿ ಹೋಳಿ ಆಚರಿಸಬೇಕೆಂದರು. ಪೊಲೀಸ್‌ ಆಯುಕ್ತ ಲಾಬೂರಾಮ ಮಾತನಾಡಿ, ಕೊರೊನಾದಂತಹ ಮಾರಕ ರೋಗದ ಸಂದರ್ಭದಲ್ಲಿ ಜಾಗೃತಿ ವಹಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಕೋವಿಡ್‌ ಮಾರ್ಗಸೂಚಿ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸಿ ಹೋಳಿ ಹಬ್ಬ ಆಚರಿಸಬೇಕು. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಂಘಟನೆಗಳು ಹಲಗಿ ಹಬ್ಬ, ಹೋಳಿ ಮೆರವಣಿಗೆಗಳನ್ನು ಆಯೋಜಿಸದೇ ತಮ್ಮ ತಮ್ಮ ಮನೆಗಳಲ್ಲಿಯೇ ಸುರಕ್ಷಿತವಾಗಿ, ಸಂಕ್ಷಿಪ್ತವಾಗಿ ಹೋಳಿ ಹಬ್ಬ ಆಚರಿಸುವಂತೆ ತಿಳಿವಳಿಕೆ ನೀಡಬೇಕು ಎಂದರು.

ಧಾರವಾಡ ಹಲಗಿ ಹಬ್ಬದ ಸಂಯೋಜಕ ಶಂಕರ ಶೇಳಕೆ ಮಾತನಾಡಿ, ಈ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ಹಲಗೆ ಹಬ್ಬ ಹಾಗೂ ಕಾಮಣ್ಣನ ಮೆರವಣಿಗೆ ಮಾಡದೇ ದಹನ ಮಾಡಲಾಗುವುದು.ಜಿಲ್ಲಾಧಿ  ಕಾರಿಗಳು ಸೂಚಿಸಿದ ನಿಯಮಗಳನ್ನು ಎಲ್ಲರೂ ಪಾಲಿಸುತ್ತೇವೆಂದರು. ಅಮರೇಶ್‌ ಹಿಪ್ಪರಗಿ ಮಾತನಾಡಿ, ನಾವು ಯಾವುದೇ ಮೆರವಣಿಗೆ ಮಾಡಲ್ಲ. ಕಾಮಣ್ಣನ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸುತ್ತೇವೆ ಎಂದರು. ಮೋತಿಲಾಲ್‌ ಸಾಬ್‌ ಕಬಾಡೆ ಮಾತನಾಡಿ, ಕಮರಿಪೇಟೆಯಲ್ಲಿ ಯಾವುದೇ ರೀತಿಯ ಮೆರವಣಿಗೆ ಮಾಡದೇ ಕೋವಿಡ್‌ ನಿಯಮಗಳನ್ನು ಪಾಲಿಸುವ ಮೂಲಕ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ನೀಡಿರುವ ಸೂಚನೆಗಳನ್ನು ಪಾಲಿಸುತ್ತೇವೆ ಎಂದರು.

ಗುರುನಾಥ ನೇಮಿಕರ ಮಾತನಾಡಿ, ಹುಬ್ಬಳ್ಳಿಯ ಚನ್ನಪೇಟದಲ್ಲಿ 5 ದಿನಗಳ ಕಾಲ ಕಾಮದೇವರ ಪ್ರತಿಷ್ಠಾಪಿಸಿ, ನಂತರ ಕಾಮದಹನ ಮಾಡುತ್ತೇವೆ. ದೊಡ್ಡ ಪ್ರಮಾಣದ ಯಾವುದೇ ಮೆರವಣಿಗೆ ಮಾಡದೇ ನಿಯಮಗಳನ್ನು ಪಾಲಿಸುತ್ತೇವೆ ಎಂದರು. ಅವಳಿ ನಗರದ ವಿವಿಧ ಸಂಘಟನೆಗಳ ಪದಾಧಿ ಕಾರಿಗಳಾದ ಸುನೀಲೆ ಘೋಡೆR, ಪ್ರಕಾಶ ಬುರಬುರೆ, ಸಂತೋಷ ಆವನ್ನವರ, ಚನ್ನಪ್ಪ ಚುಳಕಿ, ಧರ್ಮದಾಸ ಸಾತಕುತೆ, ಅಂಬಾಸ ಜಿತೂರೆ, ಇಕ್ಬಾಲ್‌ ಜಮಾದಾರ, ಅರವಿಂದ ಏಕನಗೌಡರ ಸೇರಿದಂತೆ ವಿವಿಧ ಸಮುದಾಯಗಳ ಸುಮಾರು 50ಕ್ಕೂ ಹೆಚ್ಚು ಮುಖಂಡರು, ಅವಳಿ ನಗರದಲ್ಲಿ ಕೋವಿಡ್‌-19 ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸರಳವಾಗಿ, ಶಾಂತಿಯುತವಾಗಿ, ಸಂಕ್ಷಿಪ್ತವಾಗಿ ಹೋಳಿ ಹಬ್ಬ ಆಚರಿಸುತ್ತೇವೆ.

Advertisement

ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಗೆ ಸಹಕಾರ ನೀಡುವುದಾಗಿ ತಿಳಿಸಿದರು. ಪಾಲಿಕೆ ಆಯುಕ್ತ ಡಾ|ಸುರೇಶ್‌ ಇಟ್ನಾಳ, ಉಪ ಪೊಲೀಸ್‌ ಆಯುಕ್ತ ರಾಮರಾಜನ್‌, ಎಸಿಪಿಗಳಾದ ಮಲ್ಲಿಕಾರ್ಜುನ ಮಲ್ಲಾಪೂರ, ವಿನೋದ ಮುಕ್ತೇದಾರ, ಅನುಷಾ ಜಿ.ಸೇರಿದಂತೆ ವಿವಿಧ ಪೊಲೀಸ್‌ ಅ ಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು. ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆರ್‌.ಬಿ. ಬಸರಗಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next