Advertisement
ಅಂದಹಾಗೆ, ಈ ಬಾರಿ ಅವರು “ರಂಗನಾಯಕಿ’ ಹೆಸರಿನ ಚಿತ್ರಕ್ಕೆ ಕೈ ಹಾಕಿದ್ದಾರೆ ಎಂಬುದೇ ವಿಶೇಷ. “ರಂಗನಾಯಕಿ’ ಅಂದಾಕ್ಷಣ, ಥಟ್ಟನೆ ನೆನಪಾಗೋದೇ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಎವರ್ಗ್ರೀನ್ ಚಿತ್ರ “ರಂಗನಾಯಕಿ’. ಹಾಗಂತ, ಆ ಚಿತ್ರಕ್ಕೂ ದಯಾಳ್ ನಿರ್ದೇಶಿಸುತ್ತಿರುವ “ರಂಗನಾಯಕಿ’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ.
Related Articles
Advertisement
ನಾಯಕಿಯದ್ದೇ ಇಲ್ಲಿ ಪ್ರಮುಖ ಅಂಶ. ಒಂದು ಘಟನೆಯಲ್ಲಿ ಸಿಲುಕಿಕೊಳ್ಳುವ ಆಕೆ, ಸಮಾಜವನ್ನು ಹೇಗೆ ಎದುರಿಸುತ್ತಾಳೆ, ಹೋರಾಡುತ್ತಾಳೆ ಮತ್ತು ಬದುಕುತ್ತಾಳೆ ಅನ್ನೋದು ಕಥೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ನವೀನ್ಕೃಷ್ಣ ಅವರು ಸಂಭಾಷಣೆ ಬರೆದಿದ್ದಾರೆ.
ಸುಮಾರು 25 ದಿನಗಳ ಕಾಲ ಶೇ.99 ರಷ್ಟು ಬೆಂಗಳೂರಲ್ಲೇ ಚಿತ್ರೀಕರಣಗೊಳ್ಳಲಿದೆ. ಸಿನಿಮಾದಲ್ಲಿ ನಾಯಕಿಯ ಪಾತ್ರ ಬೋಲ್ಡ್ ಆಗಿರಲಿದೆ. ತುಂಬಾ ವಿಭಿನ್ನ ಪಾತ್ರವಾಗಿದ್ದು, ಎಲ್ಲರಿಗೂ ಇಷ್ಟವಾಗುವಂತಹ ಚಿತ್ರ ಕೊಡುವ ಪ್ರಯತ್ನ ಮಾಡುತ್ತಿದ್ದೇನೆ. ಮಣಿಕಾಂತ್ ಕದ್ರಿ ಸಂಗೀತವಿದೆ. ರಾಕೇಶ್ ಛಾಯಾಗ್ರಹಣವಿದೆ. ಸುನೀಲ್ ಸಂಕಲನವಿದೆ.