Advertisement

Davangere: ಈಜುಕೊಳದಲ್ಲಿ ಬಾಲಕರಿಬ್ಬರ ಸಾವು

09:59 PM May 20, 2023 | Team Udayavani |

ದಾವಣಗೆರೆ: ಈಜುಕೊಳದಲ್ಲಿ ಈಜಲು ಹೋಗಿದ್ದ ಬಾಲಕರಿಬ್ಬರು ಮೃತಪಟ್ಟ ಘಟನೆ ನಗರದ ದೇವರಾಜ ಅರಸ್‌ ಬಡಾವಣೆಯಲ್ಲಿರುವ ಈಜುಕೊಳದಲ್ಲಿ ಸಂಭವಿಸಿದೆ. ಮುಬಾರಕ್‌ (15), ತಾಜುದ್ದೀನ್‌ (16) ಮೃತಪಟ್ಟ ಬಾಲಕರು.

Advertisement

ಈಜಲು ಬಾರದ ಇವರು ಮನೆಯಲ್ಲಿ ಯಾರಿಗೂ ತಿಳಿಸದೆ ಸ್ನೇಹಿತರೊಂದಿಗೆ ಶುಕ್ರವಾರ ಸಂಜೆ ಈಜುಕೊಳಕ್ಕೆ ಹೋಗಿದ್ದರು. ಈಜುತ್ತಿದ್ದ ವೇಳೆ ಬಹಳ ಹೊತ್ತಿನವರೆಗೂ ಮೇಲೆ ಬಾರದೇ ಇದ್ದಾಗ ಅನುಮಾನಗೊಂಡ ಗೆಳೆಯರು ಈಜುಕೊಳದ ಮುಖ್ಯಸ್ಥರಿಗೆ ಮತ್ತು ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅವರು ಬಂದು ನೋಡುವಷ್ಟರಲ್ಲಿ ಬಾಲಕರಿಬ್ಬರೂ ಮೃತಪಟ್ಟಿದ್ದರು ಎನ್ನಲಾಗಿದೆ.

ಬಾಲಕರ ಸಾವಿಗೆ ಈಜುಕೊಳದ ಸಿಬ್ಬಂದಿ ಮತ್ತು ಮಹಾನಗರ ಪಾಲಿಕೆ ಕಾರಣ ಎಂದು ಆರೋಪಿಸಿ ಬಾಲಕರ ಪೋಷಕರು ಬಸವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next