Advertisement

ಗ್ರಾಮೀಣ ಭಾಗಕ್ಕೂ ಕಾಲಿಟ್ಟ ಮಹಾಮಾರಿ

11:39 AM Jun 19, 2020 | Naveen |

ದಾವಣಗೆರೆ: ನಗರ ಪ್ರದೇಶದಲ್ಲಿ ಕಾಡುತ್ತಿದ್ದ ಮಹಾಮಾರಿ ಕೋವಿಡ್ ಈಗ ಗ್ರಾಮೀಣ ಭಾಗಕ್ಕೂ ವಕ್ಕರಿಸಿದೆ. ದಾವಣಗೆರೆ ಜಿಲ್ಲೆಯಲ್ಲಿ ಗುರುವಾರ ದೃಢಪಟ್ಟ ಮೂರು ಹೊಸ ಪ್ರಕರಣಗಳಲ್ಲಿ ಎರಡು ಪ್ರಕರಣ ಗ್ರಾಮೀಣ ಭಾಗಕ್ಕೆ ಸಂಬಂಧಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ಶೀತ ಜ್ವರ ಸಮಸ್ಯೆಯಿಂದ ಬಳಲುತ್ತಿದ್ದ ಹೊನ್ನಾಳಿ ತಾಲೂಕಿನ ಬಸವನಹಳ್ಳಿಯ 30 ವರ್ಷದ ಮಹಿಳೆ (ರೋಗಿ ನಂಬರ್‌ 7804), ದಾವಣಗೆರೆ ತಾಲೂಕಿನ ಶ್ಯಾಗಲೆ ಗ್ರಾಮದ 32 ವರ್ಷದ ಮಹಿಳೆಗೆ (ರೋಗಿ ನಂಬರ್‌ 7805) ಕೋವಿಡ್ ವಕ್ಕರಿಸಿದೆ. ರಾಜಸ್ಥಾನದಿಂದ ಹಿಂತಿರುಗಿದ್ದ ದಾವಣಗೆರೆಯ ಆಂಜನೇಯ ಬಡಾವಣೆಯ 25 ವರ್ಷದ ಯುವಕ(ರೋಗಿ ನಂಬರ್‌ 7803) ಸೋಂಕು ಕಾಣಿಸಿಕೊಂಡಿದೆ.

ಕೋವಿಡ್ ನಿಂದ ಗುಣಮುಖರಾದ ರೋಗಿ ನಂಬರ್‌ 6151, 6152, 6153, 6154, 6155, 6156, 6157 ಹಾಗೂ 6158 ಗುರುವಾರ ಜಿಲ್ಲಾ ಕೋವಿಡ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 233 ಪ್ರಕರಣಗಳಲ್ಲಿ ಈವರೆಗೆ 215 ಸೋಂಕಿತರು ಆಸ್ಪತ್ರೆಯಿಂದ ಡಿಸಾcರ್ಜ್‌ ಆಗಿದ್ದಾರೆ. ಆರು ಜನರು ಮೃತಪಟ್ಟಿದ್ದು, 12 ಸಕ್ರಿಯ ಪ್ರಕರಣಗಳಿವೆ. ಜಾಲಿನಗರದ ಎಲ್ಲಾ ಸೋಂಕಿತರು ಗುಣಮುಖರಾಗಿಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ಡಿಸಿ ತಿಳಿಸಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next