Advertisement

Davanagere; ಕಾಂಗ್ರೆಸ್ ಸಂಧಾನ ವಿಫಲ; ನಾಮಪತ್ರ ಹಿಂಪಡೆಯಲು ವಿನಯ್ ಕುಮಾರ್ ನಕಾರ

12:53 PM Apr 14, 2024 | Team Udayavani |

ದಾವಣಗೆರೆ: ಕಾಂಗ್ರೆಸ್ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿ ನಾಮಪತ್ರ ಸಲ್ಲಿಸಿರುವ ಬಿ.ಜಿ. ವಿನಯ್ ಕುಮಾರ್ ಮನವೊಲಿಕೆಗೆ ಮಾಜಿ ಸಚಿವ ಎಚ್.ಎಂ. ರೇವಣ್ಣ ನೇತೃತ್ವದ ನಿಯೋಗ ನಡೆಸಿದ ಸಂಧಾನವೂ ವಿಫಲವಾಯಿತು.

Advertisement

ಭಾನುವಾರ ಎಸ್. ಎಸ್. ಬಡಾವಣೆಯಲ್ಲಿರುವ ವಿನಯ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಎಚ್.ಎಂ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ ಇತರೆ ಮುಖಂಡರು ನಾಮಪತ್ರ ಹಿಂದಕ್ಕೆ ಪಡೆಯುವಂತೆ ಮನವೊಲಿಸಲು ಸಾಕಷ್ಟು ಪ್ರಯತ್ನ ನಡೆಸಿದರು.

ನಾಮಪತ್ರ ಹಿಂಪಡೆಯಲು ಸುತಾರಾಂ ಒಪ್ಪದ ವಿನಯಕುಮಾರ್, ಸಂಧಾನಕ್ಕೆ ತಾವು ಬಂದಿರುವುದು ಸಂತೋಷದ ವಿಚಾರ. ನನ್ನ ಸ್ಪರ್ಧೆಯನ್ನು ಗಂಭೀರವಾಗಿ ಪರಿಗಣಿಸಿರುವುದು ಇನ್ನೂ ಸಂತೋಷದ ವಿಚಾರ. ದಾವಣಗೆರೆ ಲೋಕಸಭಾ ಕ್ಷೇತ್ರದ ಜನರ ಅಪೇಕ್ಷೆಯಂತೆ ಸ್ಪರ್ಧೆ ಮಾಡುವ ನಿರ್ಧಾರ ಮಾಡಿರುವೆ. ಕಣದಲ್ಲಿ ಮುಂದುವರಿಯುವುದಾಗಿ ವಿನಯ್ ಕುಮಾರ್ ಸ್ಪಷ್ಟವಾಗಿ ತಿಳಿಸಿದರು.

ಈ ಹಿಂದೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಮ್ಮುಖದಲ್ಲಿಯೂ  ನಾಮಪತ್ರ ಹಿಂಪಡೆಯುವಂತೆ ವಿನಯಕುಮಾರ್ ಅವರ ಮನವೊಲಿಸುವ ಯತ್ನ  ನಡೆಸಲಾಗಿತ್ತು. ಆದರೆ ಅದು ಸಫಲವಾಗಿರಲಿಲ್ಲ. ಈಗ ರೇವಣ್ಣ ಸಮ್ಮುಖದ ಸಂಧಾನವೂ ವಿಫಲವಾದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next