Advertisement

Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ

07:54 PM Apr 22, 2024 | Team Udayavani |

ದಾವಣಗೆರೆ : ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಅಪರೂಪದ ಪ್ರಾಣಿ ಕೊಂಡುಕುರಿಯನ್ನು ಮತದಾನ ಜಾಗೃತಿ ಲಾಂಛನವನ್ನಾಗಿ ಬಳಸಲು ಜಿಲ್ಲಾ ಸ್ವೀಪ್ ಸಮಿತಿ ನಿರ್ಧಾರ ಮಾಡಿದೆ.

Advertisement

ಕೊಂಡುಕುರಿ ಜಿಲ್ಲೆಯ ಜಗಳೂರು ತಾಲೂಕಿನ ರಂಗಯ್ಯನದುರ್ಗ ಅಭಯಾರಣ್ಯ ಪ್ರದೇಶದಲ್ಲಿ ಕಂಡುಬರುವ ಅಪರೂಪದ ಜೀವ ವೈವಿಧ್ಯವಾಗಿದೆ. ಜಿಂಕೆಯನ್ನು ಹೋಲುವ ಕೊಂಡುಕುರಿ ಏಷ್ಯಾ ಖಂಡದಲ್ಲಿಯೇ ಅಪರೂಪದ ಜೀವಸಂಕುಲವಾಗಿದ್ದು ನಾಚಿಕೆ ಸ್ವಭಾವದ ಪ್ರಾಣಿ ಎಂದು ಪರಿಗಣಿಸಲ್ ಪಟ್ಟಿದೆ.

ಸೌಮ್ಯ ಸ್ವಾಭಾವದ ಕೊಂಡುಕುರಿಯನ್ನು ಚುನಾವಣೆಯಲ್ಲಿ ಜಿಲ್ಲೆಯ ಐಕಾನ್ ಆಗಿ ಚುನಾವಣಾ ಸೌಮ್ಯತೆ ಹೆಚ್ಚಿಸಬಹುದೆಂಬ ಉದ್ದೇಶದಿಂದ ಬಳಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next