Advertisement

ಪಾಲಿಕೆಯಿಂದಲೇ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ

02:14 PM Sep 09, 2021 | Team Udayavani |

ದಾವಣಗೆರೆ : ಮಹಾನಗರ ‌ ಪಾಲಿಕೆಯ ಸ್ಮಶಾನಗಳಲ್ಲಿ ನಗರಪಾಲಿಕೆಯಿಂದಲೇ ಉಚಿತವಾಗಿ ಅಂತ್ಯಸಂಸ್ಕಾರರದ ವ್ಯವಸ್ಥೆ ಮಾಡಲಾಗುವುದು ಎಂದು ಮೇಯರ್‌ ಎಸ್‌.ಟಿ. ವೀರೇಶ್‌ ತಿಳಿಸಿದರು.

Advertisement

ಬುಧವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವ‌ಹಿಸಿ ಅವ‌ರು ಮಾತನಾಡಿದರು. ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ಮಶಾನಗಳಲ್ಲಿ ಗುಂಡಿ ತೆಗೆಯುವುದನ್ನು ಒಳಗೊಂಡಂತೆ ಇನ್ನು ಕೆಲವು ‌ಕಡೆ ಹೆಚ್ಚಿನ ಹ‌ಣ ವಸೂಲಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರಿಂದ ಸಾಕಷ್ಟು ದೂರು ಕೇಳಿ ಬಂದಿವೆ.

ಇನ್ನು ಮುಂದೆ ನಗರಪಾಲಿಕೆಯಿಂದ ಉಚಿತ ‌ವಾಗಿ ಅಂತ್ಯಸಂಸ್ಕಾರಕ್ಕೆ ಅಗತ್ಯವಾದ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರು ಯಾವುದೇ ಶುಲ್ಕ ಕಟ್ಟಬೇಕಿಲ್ಲ ಎಂದರು. ಉಚಿತವಾಗಿ ಅಂತ್ಯಸಂಸ್ಕಾರ ‌ ನೆರವೇರಿಸುವುದಕ್ಕಾಗಿ ನಗರ ‌ಪಾಲಿಕೆಯಿಂದಲೇ ಏಜೆನ್ಸಿ ನಿಗ ‌ದಿ ಪ‌ಡಿಸಲಾಗುವುದು. ಆ ಏಜೆನ್ಸಿಗೆ ‌ನಗ ‌ರ ಪಾಲಿಕೆಯಿಂದ ‌ ಹಣ ಪಾವತಿ ಮಾಡಲಾಗುವುದು. ಸಾರ್ವಜನಿಕರು ಅಂತ್ಯ ‌ಸಂಸ್ಕಾರದ‌ ಪ್ರಕ್ರಿಯೆಗಳಿಗೆ ಹಣ ನೀಡುವಂತಿಲ್ಲ ಎಂದು ಘೋಷಣೆ ಮಾಡುತ್ತಿದ್ದಂತೆ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದ‌ರು.

ಇದನ್ನೂ ಓದಿ : ನಟಿ Sreeleela ಫೋಟೋ ಗ್ಯಾಲರಿ

 ಒಂದು ವೇಳೆ ನಿಗದಿಗೆ ಒತ್ತಾಯ : ಸಭೆಯ ಪ್ರಾರಂಭದಲ್ಲೇ ವಿಪಕ್ಷ ನಾಯಕ ಎ. ನಾಗರಾಜ್‌, ಕಳೆದ ಐದು ತಿಂಗಳನಿಂದ ಸಾಮಾನ್ಯಸಭೆ ನಡೆದೇ ಇಲ್ಲ. ಅಧಿಕಾರದ‌ಲ್ಲಿರುವ ಕೈಗೆ ಸಿಕ್ಕಿಲ್ಲ. ಅಧಿಕಾರಿಗಳು ಮಾತು ಕೇಳುವುದೇ ಇಲ್ಲ. ಎಲ್ಲ 45 ವಾರ್ಡ್‌ಗಳಲ್ಲಿ ಹಲವಾರು ಸಮಸ್ಯೆ ಇವೆ. ಎಲ್ಳಾ ಸಮಸ್ಯೆ ಒಂದರೆಡು ನಿಮಿಷಗಳಲ್ಲಿ ತಮ್ಮ ವಾರ್ಡ್‌ನಲ್ಲಿ ಸಮಸ್ಯೆ ಹೇಳುವುದಕ್ಕೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ವಾರ್ಡ್‌ ಸದಸ್ಯರು ಸಮಸ್ಯೆಗಳ ಬಗ್ಗೆ  ಹೇಳಿಕೊಳ್ಳುವುದಕ್ಕೆ ಶೂನ್ಯ ‌ವೇಳೆಗೆ ಅವಕಾಶ ಮಾಡಿಕೊಡಬೇಕು ಎಂಬ ವಿಪಕ್ಷ ನಾಯಕರು ಒತ್ತಾಯ ನ್ಯಾಯೋಚಿತವಾಗಿದೆ. ಹಾಗಾಗಿ ಸಭೆಯ ಕೊನೆಯಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು. 1-2 ಅಲ್ಲ, ಬೇಕಾದರೆ ಐದು ನಿಮಿಷಗಳ ಕಾಲಾವಕಾಶ ನೀಡ‌ಲಾಗುವುದು ಎಂದು ಮೇಯರ್‌ ಎಸ್‌.ಟಿ. ವೀರೇಶ್‌ ತಿಳಿಸಿದರು.

Advertisement

ಪ್ರತಿಧ್ವನಿಸಿದ ಡೊರ್ ನಂಬರ್ ವಿಷಯ : ನಗರ ‌ಪಾಲಿಕೆಯ ವಿವಿ ‌ ವಾರ್ಡ್‌ಗಳಲ್ಲಿ ಸಮಸ್ಯ ಗಮನಕ್ಕೂ ತಾರದೇ ಡೋರ್‌ ನಂಬರ್‌ ನೀಡಲಾಗಿದೆ. ಬಿ.ಜಿ. ಅಜಯ್‌ಕುಮಾರ್‌ ಅಧಿಕಾರ ಅ‌ಧಿಯಲ್ಲಿ ಡೋರ್‌ ನಂಬರ್‌ ನೀಡುವ ‌ ಸಂಬಂಧ ಐವರ ಸಮಿತಿ ರಚನೆ ‌ಮಾಡಲಾಗುವುದು. ಸಮಿತಿ ಸರಳ ಪರಿಶೀಲನೆ ಕೈಗೊಂಡು ವರದಿ ಸಲ್ಲಿಸಿದ ನಂತರವೇ ಡೋರ್‌ ನಂಬರ್‌ ನೀಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೇ ಈವರೆಗೆ ಸಮಿತಿಯ ರಚನೆಯನ್ನೇ ಮಾಡಿಲ್ಲ. ಅಧಿಕಾರಿಗಳು ಯಾರ ಗಮನಕ್ಕೂ ತಾ‌ರದೆ ಡೋರ್‌ ನಂಬರ್‌ ನೀಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಎ. ನಾಗರಾಜ್‌, ಕೆ. ಚ ‌ಮನ್‌ ಸಾಬ್‌, ಅಬ್ದುಲ್‌ ಲತೀಫ್‌ ಇತರರು ತೀವ್ರ ಆಕ್ಷೇಪ ವ್ಯಕ ‌ ಪಪಡಿಸಿದರು.

ಐವರ ಸಮಿತಿ  ರ‌ಚನೆ ಮಾಡುವ ‌ ಬಗ್ಗೆ ತೀರ್ಮಾನವೇ ಆಗಿರ‌ಲಿಲ್ಲ ಎಂದು ಮೇಯರ್‌ ಬಿ.ಜಿ. ಅಜಯ್‌ ಕುಮಾರ್‌ ಹೇಳಿದರು. ಇದರಿಂದ ಕೆರಳಿದ ಕಾಂಗ್ರೆಸ್‌ ಸದಸ್ಯರು, ಐವರ ಸಮಿತಿ ರಚನೆಯ ಬಗ್ಗೆ ಚರ್ಚೆ  ತೀರ್ಮಾನವೂ ಆಗಿತ್ತು.

ರಾಜೀವಗಾಂಧಿ   ಯೋಜನೆಯಡಿ ಆಜಾದ್‌ ನಗರ, ಜಾಲಿನಗರ ಇತರೆ ಕೊಳಚೆ ಪ್ರದೇಶಗಳ ಸೇರ್ಪಡೆ ಮಾಡಿ ಸ‌ರ್ಕಾರದ ಅನುಮೋದನೆಗೆ ಕಳಿಸಬೇಕು ಎಂದು ವಿಪಕ್ಷ ನಾಯಕ ಎ. ನಾಗರಾಜ್‌, ಕೆ. ಚಮನ್‌ ಸಾಬ್‌ ಒತ್ತಾಯಿಸಿದರು. ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌, ಯೋಜನೆಯ ಅನುದಾನ ‌ ವಾಪಸ್‌ ಆಗದಂತೆ ಬೇರೆಯವರಿಗೆ ಅವಕಾಶ‌ ಮಾಡಿಕೊಡಿ ಎಂದು ಸೂಚಿಸಿದರು. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ‌ ಶಾಸ‌ಕ ‌ ಎಸ್‌. ಎ. ರವೀಂದ್ರನಾಥ್‌, ಉಪ ಮೇಯರ್‌ ಶಿಲ್ಪಾ ಜಯಪ್ರಕಾಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಉಮಾ ಪ್ರಕಾಶ್‌, ಎಲ್‌.ಡಿ. ಗೋಣೆಪ್ಪ, ರೇಣುಕಾ ಶ್ರೀನಿವಾಸ್‌, ಗೀತಾ ದಿಳ್ಯೆಪ್ಪ ಇತರರು ಇದ್ದರು.

ಇದನ್ನೂ ಓದಿ : ಗಣೇಶನಿಗೆ ಇಷ್ಟವಾದ ಮೋದಕ ಮಾಡುವುದು ಹೇಗೆ ಎಂದು ನಿಮಗೆ ಗೊತ್ತಿದೆಯಾ..? ಇಲ್ಲಿದೆ ಮಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next