Advertisement

ಕೆಂಡ ಹಾಯ್ದ ಮಾಜಿ ಸಚಿವ ಮಲ್ಲಿಕಾರ್ಜುನ್‌

09:40 PM Apr 05, 2023 | Team Udayavani |

ದಾವಣಗೆರೆ: ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಬುಧವಾರ ನಗರದ ಹಳೇಪೇಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಕೆಂಡ ಹಾಯ್ದರು. ಹಳೇಪೇಟೆ ಶ್ರೀ ವೀರಭದ್ರೇಶ್ವರಸ್ವಾಮಿ ಮಹಾರಥೋತ್ಸವದ ಹಿಂದಿನ ದಿನ ಕೆಂಡ ಹಾಯುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

Advertisement

ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅನೇಕ ವರ್ಷಗಳಿಂದ ಕೆಂಡ ಹಾಯುವ ಮೂಲಕ ಹರಕೆ ತೀರಿಸುತ್ತಾ ಬರುತ್ತಿದ್ದಾರೆ. ಹಳೇಪೇಟೆ ಶ್ರೀ ವೀರಭದ್ರೇಶ್ವರಸ್ವಾಮಿ ಮಹಾ ರಥೋತ್ಸವದ ಸಂದರ್ಭದಲ್ಲಿ ಮಲ್ಲಿಕಾರ್ಜುನ್‌ ಎಲ್ಲಿಯೇ ಇದ್ದರೂ ದಾವಣಗೆರೆಗೆ ಬಂದು ಕೆಂಡೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ವಿಧಾನಸಭೆ, ಲೋಕಸಭೆ ಚುನಾವಣೆ ಒತ್ತಡದ ನಡುವೆಯೂ ಪಾಲಿಸಿಕೊಂಡ ಬಂದ ಸಂಪ್ರದಾಯ ಮುರಿದವರಲ್ಲ. ಒಮ್ಮೆ ಆಸ್ಟ್ರೇಲಿಯಾದಿಂದ ಕೆಂಡೋತ್ಸವಕ್ಕಾಗಿಯೇ ವಾಪಸ್‌ ಬಂದ ನಿದರ್ಶನವೂ ಇದೆ. ಬುಧವಾರ ಬೆಳಗ್ಗೆ ಪತ್ನಿ ಡಾ|ಪ್ರಭಾ ಮಲ್ಲಿಕಾರ್ಜುನ್‌, ಮಗಳು ವರ್ಷಾ, ಮಗ ಸಮರ್ಥ್ ಹಾಗೂ ಕುಟುಂಬಸ್ಥರ ಜತೆಗೂಡಿ ದೇವಸ್ಥಾನಕ್ಕೆ ಆಗಮಿಸಿ ಕೆಂಡ ಹಾಯ್ದರು. ಮಗಳು ವರ್ಷಾ, ಮಗ ಸಮರ್ಥ್ ಸಹ ಕೆಂಡ ಹಾಯುವ ಮೂಲಕ ತಂದೆಗೆ ಸಾಥ್‌ ನೀಡಿದರು. ಚುನಾವಣೆಯಲ್ಲಿ ಗೆಲುವಿಗೆ ಪ್ರಾರ್ಥಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next