Advertisement

ಶಾಸಕ ರವೀಂದ್ರನಾಥ್‌ ಅಮೃತ ಮಹೋತ್ಸವ ಸಮಾರಂಭ

06:45 PM Nov 25, 2021 | Team Udayavani |

ದಾವಣಗೆರೆ: ದಾವಣಗೆರೆ ಉತ್ತರವಿಧಾನಸಭಾ ಕ್ಷೇತ್ರದ ಶಾಸಕಎಸ್‌.ಎ. ರವೀಂದ್ರನಾಥ್‌ರವರಅಮೃತ ಮಹೋತ್ಸವ ಅಭಿನಂದನೆ ಹಾಗೂ “ಕೃಷಿ ಕಣ್ಮಣಿ’ ಕೃತಿ ಬಿಡುಗಡೆಸಮಾರಂಭ ನ. 26 ರಂದು ನಗರದಹದಡಿ ರಸ್ತೆಯ ಎಸ್‌.ಎಸ್‌.ಕಲ್ಯಾಣಮಂಟಪದಲ್ಲಿ ನಡೆಯಲಿದೆ ಎಂದು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಬಿ.ಜಿ. ಸಂಗಪ್ಪ ಗೌಡ್ರು ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಅಪ್ಪಟ ಗ್ರಾಮೀಣ ಭಾಗದಿಂದಬಂದಿರುವ ಎಸ್‌.ಎ. ರವೀಂದ್ರನಾಥ್‌ಐದು ಬಾರಿ ಶಾಸಕರಾಗಿ, ಮೂರುಬಾರಿ ಸಚಿವರಾಗಿ, ಜನಾನುರಾಗಿಯಾಗಿಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನ.26ಕ್ಕೆ 75 ವರ್ಷ ಪೂರೈಸಿ 76ನೇವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವಸಂದರ್ಭದಲ್ಲಿ ಅಮೃತ ಮಹೋತ್ಸವಅಭಿನಂದನೆ ಹಾಗೂ ಅವರ ಕುರಿತಾದ”ಕೃಷಿ ಕಣ್ಮಣಿ’ ಕೃತಿ ಬಿಡುಗಡೆ ಸಮಾರಂಭಏರ್ಪಡಿಸಲಾಗಿದೆ ಎಂದರು.

ಶುಕ್ರವಾರ ಬೆಳಗ್ಗೆ 11ಕ್ಕೆಸಮಾರಂಭವನ್ನು ಮುಖ್ಯಮಂತ್ರಿಬಸವರಾಜ ಬೊಮ್ಮಾಯಿಉದ್ಘಾಟಿಸುವರು. ಮಾಜಿಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ “ಕೃಷಿ ಕಣ್ಮಣಿ’ ಕೃತಿಬಿಡುಗಡೆ ಮಾಡುವರು. ಬಿಜೆಪಿರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ಗೌರವ ಸಮರ್ಪಣೆ ಸಲ್ಲಿಸುವರು.ಸಂಸದ ಡಾ| ಜಿ.ಎಂ. ಸಿದ್ದೇಶ್ವರಅಭಿನಂದನಾ ನುಡಿಗಳನ್ನಾಡುವರು.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿಬಸವರಾಜ್‌, ಮುಖ್ಯಮಂತ್ರಿಗಳರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರಾದಎಸ್‌.ವಿ. ರಾಮಚಂದ್ರ, ಮಾಡಾಳ್‌ವಿರೂಪಾಕ್ಷಪ್ಪ, ಪ್ರೊ| ಎನ್‌. ಲಿಂಗಣ್ಣ,ಜಿ. ಕರುಣಾ ಕರ ರೆಡ್ಡಿ, ಎನ್‌.ರವಿಕುಮಾರ್‌, ಡಾ| ಎ.ಎಚ್‌.ಶಿವಯೋಗಿಸ್ವಾಮಿ, ಬಿಜೆಪಿ ರಾಜ್ಯಉಪಾಧ್ಯಕ್ಷ ನಂದೀಶ್‌, ಮೇಯರ್‌ಎಸ್‌.ಟಿ. ವೀರೇಶ್‌, ಜಿಲ್ಲಾಧ್ಯಕ್ಷ ಎಸ್‌.ಎಂ. ವೀರೇಶ್‌ ಹನಗವಾಡಿ ಇತರರುಭಾಗವಹಿಸುವರು. ರವೀಂದ್ರನಾಥ್‌ಹಾಗೂ ರತ್ನಮ್ಮ ದಂಪತಿಯನ್ನುಅಭಿನಂದಿಸಲಾಗುವುದು ಎಂದು ಹೇಳಿದರು.

ಮೇಯರ್‌ ಎಸ್‌.ಟಿ.ವೀರೇಶ್‌ ಮಾತನಾಡಿ, ಸಾರ್ವಜನಿಕಕ್ಷೇತ್ರದಲ್ಲಿರುವಂತ ಹವರಿಗೆ75ನೇ ವರ್ಷದ ಜನ್ಮದಿನಾಚರಣೆಅವಿಸ್ಮರಣೀಯ ಮತ್ತು ವಿಶಿಷ್ಟಸಂಭ್ರಮ. ಜನಸಂಘದ ಕಾಲದಿಂದಲೂಒಂದೇ ಪಕ್ಷ ನಿಷ್ಠೆ ಹೊಂದಿರುವ ಎಸ್‌.ಎ. ರವೀಂದ್ರನಾಥ್‌ ಸಾಮಾಜಿಕವಾಗಿಹಾಗೂ ರಾಜಕೀಯವಾಗಿ ಸರಳ,ಸಜ್ಜನಿಕೆಯ ನಡೆ-ನುಡಿಯಮೂಲಕವೇ ನನ್ನಂತಹವರುಒಳಗೊಂಡಂತೆ ಸಾವಿರಾರುಕಾರ್ಯಕರ್ತರಿಗೆ ಮಾದರಿ ಮತ್ತುಪ್ರೇರಣೆಯಾದವರು.

Advertisement

ಅವರಕಾರ್ಯಶೈಲಿಯಿಂದ ಪ್ರಭಾವಿತರಾಗಿಅನೇಕರು ಸಾರ್ವಜನಿಕ ಸೇವೆಗೆಬಂದವರಿದ್ದಾರೆ ಎಂದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷಶಿವಾಜಿ ಪಾಟೀಲ್‌ ಮಾತನಾಡಿ,ಶಿರಮಗೊಂಡನಹಳ್ಳಿಯ ದಲಿತಮಹಿಳೆಯೊಬ್ಬರಿಗೆ ಸಕ್ಕರೆ ಕೊಡಿಸುವವಿಚಾರವಾಗಿ ರಾಜಕೀಯ ಜೀವನಕ್ಕೆಪ್ರವೇಶಿಸಿದ ರವೀಂದ್ರನಾಥ್‌ ಸೊಸೈಟಿ,ಗ್ರಾಮ ಪಂಚಾಯತ್‌, ಪಿಎಲ್‌ಡಿ,ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿವಿಧಾನಸಭೆ ಪ್ರವೇಶಿಸಿದವರು ಎಂದುತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯಕೆ. ಪ್ರಸನ್ನಕುಮಾರ್‌, ಕೆ.ಎನ್‌.ಹನುಮಂತಪ್ಪ, ಬಸವರಾಜಯ್ಯ,ರಾಜು ಶಾಮನೂರುಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next