Advertisement

ವಾಮದೇವಪ್ಪಗೆ ಭರ್ಜರಿ ಗೆಲುವಿನ ಖುಷಿ

03:30 PM Nov 23, 2021 | Team Udayavani |

ದಾವಣಗೆರೆ: ಕನ್ನಡ ಸಾಹಿತ್ಯ ಪರಿಷತ್‌ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನಿವೃತ್ತಶಿಕ್ಷಕ ಬಿ. ವಾಮದೇವಪ್ಪ ಆಯ್ಕೆಯಾಗಿದ್ದು,ಭಾನುವಾರ ನಡೆದ ಚುನಾವಣೆಯಲ್ಲಿ3026 ಮತಗಳ ಅಂತರದಿಂದ ಭರ್ಜರಿಗೆಲುವು ಸಾಧಿಸಿದ್ದಾರೆ.

Advertisement

ಬಿ. ವಾಮದೇವಪ್ಪ 3920 ಮತಗಳನ್ನುಪಡೆದು ಗೆಲುವಿನ ನಗೆ ಬೀರಿದರೆ,ಪ್ರತಿಸ್ಪರ್ಧಿ ಶಿವಕುಮಾರಸ್ವಾಮಿ ಕುರ್ಕಿ 894ಮತಗಳನ್ನು ಪಡೆದು ಪರಾಭವಗೊಂಡರು.

ಚಲಾವಣೆಯಾದ ಒಟ್ಟೂ 4934 ಮತಗಳಲ್ಲಿ120 ಮತಗಳು ತಿರಸ್ಕೃತಗೊಂಡಿವೆ.ಭಾನುವಾರ ಮಧ್ಯರಾತ್ರಿ ಜಿಲ್ಲಾಚುನಾವಣಾಧಿಕಾರಿಗಳು ನೂತನ ಅಧ್ಯಕ್ಷರಆಯ್ಕೆಯನ್ನು ಘೋಷಿಸಿದರು.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣಾಕಣದಲ್ಲಿ ಇಬ್ಬರೇ ಇದ್ದಿದ್ದರಿಂದ ನೇರ ಸ್ಪರ್ಧೆಏರ್ಪಟ್ಟಿತ್ತು. ಅಧ್ಯಕ್ಷರಾಗಿ ಆಯ್ಕೆಯಾಗಿರುವನಿವೃತ್ತ ಶಿಕ್ಷಕ ಬಿ. ವಾಮದೇವಪ್ಪ ಹಾಲಿಕಸಾಪ ತಾಲೂಕು ಅಧ್ಯಕ್ಷರೂ ಆಗಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next