Advertisement

ಮನ ಕಲಕಿದ ಗೋವುಗಳ ಮೂಕ ರೋದನ

04:17 PM Nov 22, 2021 | Team Udayavani |

ದಾವಣಗೆರೆ: ಅಪಘಾತಕ್ಕೊಳಗಾಗಿ ಮೃತಪಟ್ಟಹಸುವಿನ ಸುತ್ತ ನಾಲ್ಕೈದು ಗೋವುಗಳು ನಿಂತುಮೂಕ ರೋದನ ವ್ಯಕ್ತಪಡಿಸಿದ ಘಟನೆ ಭಾನುವಾರನಗರದ ತರಕಾರಿ ಮಾರುಕಟ್ಟೆ ಮುಂಭಾಗದ ಪಿ.ಬಿ.ರಸ್ತೆಯಲ್ಲಿ ಸಂಭವಿಸಿತು.ವೇಗವಾಗಿ ಬಂದ ಅಪರಿಚಿತ ಕಾರೊಂದುರಸ್ತೆಯಲ್ಲಿದ್ದ ಹಸುವಿಗೆ ಡಿಕ್ಕಿ ಹೊಡೆದು ಪರಾರಿಯಾಯಿತು.

Advertisement

ಅಪಘಾತದ ರಭಸಕ್ಕೆಹಸು ಸ್ಥಳದಲ್ಲಿಯೇ ಮೃತಪಟ್ಟಿತು. ಅಲ್ಲಿಯೇಸಮೀಪದಲ್ಲಿದ್ದ ನಾಲ್ಕೈದು ಗೋವುಗಳುಸಾವನ್ನಪ್ಪಿದ ಹಸುವಿನ ಸುತ್ತ ನಿಂತು ಕಣ್ಣೀರು ಹಾಕಿದವು.

ಪ್ರಾಣಿಗಳು ಮರುಕಪಡುತ್ತಿರುವಈ ದೃಶ್ಯ ನೋಡುಗರನ್ನು ಭಾವುಕರನ್ನಾಗಿಸಿತು.ಸಾವನ್ನಪ್ಪಿದ ಹಸುವಿಗೆ ಸ್ಥಳೀಯರು ಹೂವು, ಹಾಲುಹಾಕಿ ಸಂತಾಪ ಸೂಚಿಸಿ ಅಂತ್ಯಸಂಸ್ಕಾರದ ವ್ಯವಸ್ಥೆಮಾಡಿದರು. ಹಸುವಿನ ಸಾವಿಗೆ ಕಾರಣನಾದ ಕಾರುಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next